HEALTH TIPS

ಜಿಲ್ಲೆಯ ಮೂಲ ನಿವಾಸಿಗಳ ಸಮಸ್ಯೆಗಳಿಗೆ ಕೈಗನ್ನಡಿ- ವಿಶೇಷ ಅಧಿಕಾರಿಯಿಂದ ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕಾರ ಸಭೆ

   
      ಕಾಸರಗೋಡು: ಜಿಲ್ಲೆಯ ಕನ್ನಡಿಗರ ಸಹಿತ ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕಾರ ನಡೆಸಲು ಆಗಮಿಸಿರುವ ರಾಜ್ಯ ಮಟ್ಟದ ವಿಶೇಷ ಅಧಿಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಅವರು ನಡೆಸುತ್ತಿರುವ ಅಹವಾಲು ಸ್ವೀಕಾರ ಸಭೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರಂಭಗೊಂಡಿತು.   
   ಮೂಲಭೂತವಾಗಿ ಇಲ್ಲಿನ ಸ್ಥಳೀಯ ನಿವಾಸಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ವಿವಿಧ ಸಂಘಟನೆಗಳ ಪ್ರತಿನಿ„ಗಳು ಅಹವಾಲುಗಳನ್ನು ಸಲ್ಲಿಸಿದರು. ಹಿರಿಯ, ಯುವ, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಗುರುವಾರ ನಡೆದ ಸಭೆಯಲ್ಲಿ ಹಾಜರಾಗಿ, ಮನವಿಗಳನ್ನು ಸಲ್ಲಿಸುವುದರ ಜೊತೆಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಇಲ್ಲಿನ ಸಮಸ್ಯೆಗಳನ್ನು ಅವರಿಗೆ ಮನದಟ್ಟು ಮಾಡಿಕೊಟ್ಟರು.
     ಇಲ್ಲಿನ ಜನತೆಯ ಮೂಲಭೂತ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿಯಲಾಗುತ್ತಿರುವ ಬಗ್ಗೆ ಅಧಿಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಕಳಕಳಿ ವ್ಯಕ್ತಪಡಿಸಿದರು. ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡರು. ಜೊತೆಗೆ ತಾವು ನ್ಯಾಯಾಂಗ ಅಧಿಕಾರವಿರುವ ಅ„ಕಾರ ಹೊಂದದೇ ಇದ್ದರೂ, ಈ ಎಲ್ಲ ಸಮಸ್ಯೆಗಳನ್ನು ರಾಜ್ಯ ಸರಕಾರಕ್ಕೆ ವರದಿ ಮೂಲಕ ಸಲ್ಲಿಸಿ ಪರಿಹಾರಕ್ಕೆ ಗರಿಷ್ಠ ಮಟ್ಟದಲ್ಲಿ ಯತ್ನಿಸುವೆ ಎಂದು ಭರವಸೆಯನ್ನು ನೀಡಿದರು.
      ಈ ಸಂದರ್ಭ ಮಾತನಾಡಿದ ನಡುವಟ್ಟಂ ಗೋಪಾಲಕೃಷ್ಣನ್ ಅವರು ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರದೇ ಇರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಭಾಷೆ ಎಂಬ ಸಾಲಿಗೆ ಸೇರದೇ ಹೋಗಿದೆ. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಸೇರಿಕೊಂಡ ಭಾಷೆಗೆ ಸಹಜವಾಗಿಯೇ ಹಕ್ಕುಗಳು ಬರುತ್ತವೆ. ಕನ್ನಡ ಈಗಾಗಲೇ ಈ ಸಾಲಿನಲ್ಲಿದೆ. ಕೊಂಕಣಿಯನ್ನು ಈ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ ಎಂದು ಅಭಿಪ್ರಾಯಪಟ್ಟರು. 
     ಜಿಲ್ಲೆಯ ಕನ್ನಡ ಪ್ರದೇಶಗಳ ಕಚೇರಿಗಳಲ್ಲಿ ಕಡ್ಡಾಯ ಮಲೆಯಾಳಂ ಕಲಿಕೆ ಹೇರಿಕೆಗೊಳಿಸಬಾರದು, ಆಸಕ್ತರು ಕಲಿಯುವುದಿದ್ದರೆ ಸಮಸ್ಯೆಯಿಲ್ಲ. ಅರ್ಜಿಗಳು, ಶುಲ್ಕ ರಶೀದಿ ಇತ್ಯಾದಿಗಳು ಕನ್ನಡದಲ್ಲಿ ಸಿಗದೇ ಇರುವ, ಸಾರ್ವಜನಿಕರು ಕನ್ನಡದಲ್ಲಿ ಅರ್ಜಿ ಸಲ್ಲಿಸದ ವೇಳೆ ಕಚೇರಿ ಸಿಬ್ಬಂದಿ ಅದನ್ನು ನಿರ್ಲಕ್ಸ್ಯದಿಂದ ಕಾಣುವ, ಫಲಕಗಳು ಕನ್ನಡದಲ್ಲಿ ಇಲ್ಲದೇ ಇರುವ, ಗ್ರಾಮ ಪಂಚಾಯತ್‍ಗಳಲ್ಲಿ ಮಿನಿಟ್ಸ್‍ಗಳನ್ನು ಮಲೆಯಾಳಂನಲ್ಲೇ ಬರೆಯುವ, `ಕನ್ನಡ ಬಲ್ಲ' ಕೆಳದರ್ಜೆ ಗುಮಾಸ್ತ ನೇಮಕ ಪರೀಕ್ಷೆಯಲ್ಲಿ ಮಲೆಯಾಳಂನಲ್ಲೇ ಪ್ರಶ್ನೆ ಪತ್ರಿಕೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಂಗ ಅ„ಕಾರ ಹೊಂದಿರುವ ಅ„ಕಾರಿಗಳು ಆಗಮಿಸಿ ಭಾಷಾ ಅಲ್ಪಸಂಖ್ಯಾತರ ಮನವಿ ಸ್ವೀಕರಿಸಿ, ಅದರ ಶಾಶ್ವತ ಪರಿಹಾರ ಒದಗಿಸಬೇಕು, ಕಾಸರಗೋಡು, ಮಂಜೇಶ್ವರ ತಾಲೂಕು ಮಟ್ಟದಲ್ಲಿ ಸರಕಾರಿ ಕಚೇರಿಗಳಲ್ಲಿ ಸ್ಥಳೀಯ ನಿವಾಸಿಗಳೇ ನೇಮಕಗೊಳ್ಳಬೇಕು, ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಸಿದವರಿಗೆ ನೇಮಕಾತಿ ಒದಗಿಸಬೇಕು, ಜಿಲ್ಲೆಯ ಅ„ಕಾರ ಸ್ಥಾನಗಳಲ್ಲಿರುವ ಸಿಬ್ಬಂದಿ ಕನ್ನಡಿಗರೇ ಇರಬೇಕು ಎಂಬ ಆದೇಶವನ್ನು ತತ್‍ಕ್ಷಣ ಜಾರಿಗೊಳಿಸಬೇಕು, ಪ್ರತಿ ಕಚೇರಿ ಭಾಷಾಂತರ ವ್ಯವಸ್ಥೆ ಇರಬೇಕು, ಐ.ಸಿ.ಡಿ.ಎಸ್. ಸೂಪರ್ ವೈಸರ್‍ಗಳ 20ಹುದ್ದೆಗಳಲ್ಲಿ ಕನ್ನಡಿಗರನ್ನೇ ನೇಮಕಾತಿ ನಡೆಸಬೇಕು, ಕಂದಾಯ ದಾಖಲಾತಿಗಳಲ್ಲಿ ರೀ ಸರ್ವೇ ನಡೆಸಿದ ಎಲ್ಲ ದಾಖಲೆಗಳೂ ಮಲೆಯಾಳಂನಲ್ಲೇ ಇವೆ. ಅವನ್ನು ಕನ್ನಡದಲ್ಲಿ ಒದಗಿಸಬೇಕು, ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತ ಮಕ್ಕಳಿಗೆ ಮುಂದಿನ ಶಿಕ್ಷವೂ ಕನ್ನಡದಲ್ಲೇ ಸಿಗುವಂತಾಗಬೇಕು, ಮಾಯಿಪ್ಪಾಡಿ ಡಯಟ್‍ನಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ತಕ್ಷಣ ನೇಮಿಸಬೇಕು ಇತ್ಯಾದಿ ಬೇಡಿಕೆಗಳು ಬಹುಪಾಲು ರೂಪದಲ್ಲಿ ಸಲ್ಲಿಕೆ ಗೊಂಡಿತ್ತು. 
    ಅಧಿಕಾರಿ ವಲಯದಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕು ಗಳ ಬಗ್ಗೆ ಜಾಗೃತಿ ಇಲ್ಲದೇ ಇರುವುದು ಸಮಸ್ಯೆಯಗಿದ್ದು, ಈ ಬಗ್ಗೆ ಅವರನ್ನು ಶಿಕ್ಷಿತರನ್ನಾಗಿಸಬೇಕಾದ ಅಗತ್ಯವಿದೆ ಎಂಬ ಒಕ್ಕೊರಲ ಆಗ್ರಹ ಸಭೆಯಲ್ಲಿ ಕೇಳಿ ಬಂತು. ಇದಕ್ಕೆ ಸಮ್ಮತಿ ಸೂಚಿಸಿದ ವಿಶೇಷ ಅ„ಕಾರಿ ಶೀಘ್ರದಲ್ಲೇ ಅ„ಕಾರಿಗಳಿಗೆ ಈ ಸಂಬಂಧ ತರಬೇತಿ ಒದಗಿಸುವ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸುವೆ ಎಂದು ಆಶ್ವಾಸನೆ ನೀಡಿದರು.
        ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅವರು ಮಾತನಾಡಿ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ, ಅವನ್ನು ಅನುಷ್ಠಾನಕ್ಕೆ ತರುವಲ್ಲಿ ಕೆಲವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದಕ್ಕೆ ಪರಿಹಾರ ಬೇಕು. ತುಳುವಿನ ಸಮಗ್ರ ಅಭಿವೃದ್ಧಿ ನಡೆಸಿ, ಕೇರಳದ ಪಠ್ಯಪದ್ಧತಿಯಲ್ಲೂ ತುಳುವನ್ನು ಸೇರ್ಪಡೆಗೊಳಿಸುವ ಬಗ್ಗೆ ಸತತ ಯತ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ನಗರದಲ್ಲಿ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣ ನಡೆಸಲಾಗುತ್ತಿದೆ. ತುಳು ಅಕಾಡೆಮಿಗೆ ಶಾಶ್ವತ ನಿಧಿ ಒದಗಿಸಬೇಕು. ಕೇರಳ ತುಳು ಭವನದ ನಿರ್ಮಾಣ ಈಗಾಗಲೇ ಶೇ.95 ಪೂರ್ಣಗೊಂಡಿದೆ. ಇದು ತ್ವರಿತಗೊಳ್ಳಬೇಕಿದ್ದರೆ ತಕ್ಷಣ ನಿ„ಯ ಅಗತ್ಯವಿದೆ ಎಂದರು.
      ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಆರ್.ಜಯಾನಂದ ಅವರು ಮಾತನಾಡಿ ಮಲೆಯಾಳಂ ಕಲಿಕೆ ಕಡ್ಡಾಯ ನಡೆಸಕೂಡದು. ಆಸಕ್ತರಿಗೆ ಮಲೆಯಾಳಂ ಕಲಿಕೆಯ ಅವಕಾಶ ನೀಡಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸುವಾಗ ಒಂದರಿಂದ ಹತ್ತನೇ ತರಗತಿ ವರೆಗೆ ಕನ್ನಡದಲ್ಲಿ ಕಲಿತವರನ್ನೇ ನೇಮಿಸಬೇಕು, ಅಂಗನವಾಡಿ ಐ.ಸಿ.ಡಿ.ಎಸ್. ಸೂಪರ್ ವೈಸರ್‍ಗಳ ನೇಮಕಾತಿಯಲ್ಲಿ ಕನ್ನಡಿಗರನ್ನೇ ಆರಿಸಬೇಕು. ರಾಜ್ಯ ಸರಕಾರದ ವಿವಿಧ ಸೌಲಭ್ಯಗಳ ಬಗ್ಗೆ ಜಿಲ್ಲಾ ಮಾಹಿತಿ ಸಂಪರ್ಕ ಇಲಾಖೆ ಹೊರತರುತ್ತಿರುವ ಕನ್ನಡ ಹೊತ್ತಗೆ ಶೀಘ್ರದಲ್ಲೇ ಬಿಡುಗಡೆಗೊಳಿಸಬೇಕು. ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಸೂಚನೆಗಳನ್ನು ಕನ್ನಡದಲ್ಲೂ ನೀಡಬೇಕು ಇತ್ಯಾದಿ ಬೇಡಿಕೆಗಳೊಂದಿಗೆ ಮನವಿ ಸಲ್ಲಿಸಿದರು.
     ಕನಿಷ್ಠ 6 ತಿಂಗಳಿಗೊಮ್ಮೆ ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕಾರ ಸಭೆ ನಡೆಯಬೇಕು. ಸಲ್ಲಿಸಲಾದ ಅಹವಾಲುಗಳ ಪರಿಣಾಮ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
      ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಕೆ.ಮುರಳೀಧರ ಬಳ್ಳುಕ್ಕರಾಯ, ಕೆ.ಭಾಸ್ಕರ, ಕರ್ನಾಟಕ ಸಮಿತಿ ಅಧ್ಯಕ್ಷ ಬಿ.ವಿ.ಕ್ಕಕಿಲ್ಲಾಯ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ಗಮಕ ಕಲಾ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್, ಹಿರಿಯ ಕನ್ನಡ ಹೋರಾಟಗಾರ ಕೆ.ಎಂ.ಗೋಪಾಲಕೃಷ್ಣ ಭಟ್, ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಪ್ರತಿನಿಧಿ ಕೆ.ಗಂಗಾಧರ ತೆಕ್ಕೆಮೂಲೆ, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಕೆ.ವಿಶ್ವನಾಥ ರಾವ್, ಸತೀಶ ಮಾಸ್ಟರ್, ಪೂರ್ಣಿಮಾ, ಆಶಾಲತಾ ಎ., ಕೆ.ಕಮಲಾಕ್ಷ, ಚಂದ್ರಮೋಹನ ಎಂ., ರಮೇಶ್ ಕೆ., ಆಂಟನಿ ಥಾಮಸ್, ನಿರ್ಮಲಾ ಕುದ್ರೆಪ್ಪಾಡಿ, ಹುಸೇನ್ ಅನ್ವರ್, ಹರೀಶ್ ಕೆ., ಕಾರ್ತಿಕ್ ಬಿ., ಶ್ಯಾಮಪ್ರಸಾದ್ ಮಾಸ್ಟರ್, ಅನಿತಾ ಕುಮಾರಿ ಬಿ.  ಮೊದಲಾದವರು ಮನವಿ ಸಲ್ಲಿಸಿದರು.     
      ಸಭೆಯಲ್ಲಿ ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್, ಎ.ಡಿ.ಸಿ. ಹಿರಿಯ ವರಿಷ್ಠಾದಿಕಾರಿ ಅಯೂಬ್ ಖಾನ್ ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಕಲ್ಯಾಣ ಅಧಿಕಾರಿ ಲಲಿತಾ ಎಂ. ವಂದಿಸಿದರು.
        ಮಂಜೇಶ್ವರ ತಾಲೂಕಿನ ಕೆಲವು ಗ್ರಾಮ ಕಚೇರಿಗಳಿಗೆ ಭೇಟಿ : ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕಾರ ನಡೆಸಲು ಜಿಲ್ಲೆಗೆ ಆಗಮಿಸಿರುವ ರಾಜ್ಯ ಮಟ್ಟದ ಹಿರಿಯ ಅ„ಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಅವರು ಗುರುವಾರದ ಸಭೆಯ ನಂತರ ಮಂಜೇಶ್ವರ ತಾಲೂಕಿನ ಕೆಲವು ಗ್ರಾಮ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು. ಕನ್ನಡ ಮಾಧ್ಯಮ ಶಾಲೆಗಳಿಗೆ ಮುಂದಿನ ಭೇಟಿಯ ವೇಳೆಗೆ ಸಂದರ್ಶನ ನಡೆಸುವುದಾಗಿ ಅವರು ತಿಳಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries