HEALTH TIPS

ಯಾವುದೇ ಶೀರ್ಷಿಕೆಯಿಲ್ಲ

   ಕುಂಬಳೆ ಉಪಜಿಲ್ಲಾ ತ್ರಿದಿನಗಳ ಸಂಸ್ಕೃತ ಶಿಬಿರ ಇಂದಿನಿಂದ
   ಪೆರ್ಲ: ಕುಂಬಳೆ ಉಪಜಿಲ್ಲಾ ಮೂರು ದಿನಗಳ ಸಂಸ್ಕೃತ ಶಿಬಿರ "ಪಲ್ಲವಂ" ಇಂದಿನಿಂದ ಶೇಣಿ ಶ್ರೀಶಾರದಾಂಬ ಹೈಸ್ಕೂಲಿನಲ್ಲಿ ನಡೆಯಲಿದೆ.
     ಶಿಬಿರವನ್ನು ಇಂದು ಸಂಜೆ 5.30ಕ್ಕೆ ಶಾಲಾ ಪ್ರಬಂಧಕ ಸೋಮಶೇಖರ ಜೆ.ಎಸ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಪುಷ್ಪಾ ಉದ್ಘಾಟಿಸುವರು. ಮೀಯಪದವು ಶ್ರೀವಿದ್ಯಾವರ್ಧಕ ಶಾಲಾ ಸಂಸ್ಕೃತ ಶಿಕ್ಷಕ ವಿಜಯ ಕೆ. ಹಾಗೂ ಶೇಣಿ ಶಾಲಾ ನಿವೃತ್ತ ಸಂಸ್ಕೃತ ಶಿಕ್ಷಕ ಮನೋಹರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂತರ್ಿ, ಕುಂಬಳೆ ಉಪಜಿಲ್ಲಾ ಯೋಜನಾಧಿಕಾರಿ ಕುಂಞಿಕೃಷ್ಣನ್ ವಿ, ಶೇಣಿ ಹಿರಿಯ ಪ್ರಾಥಮಿಕ ಶಾಲಾ ಪ್ರಬಂಧಕಿ ಶಾರದಾ ವೈ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ.ಎಸ್, ಹೈಯರ್ ಸೆಕೆಂಡರಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಪೆರ್ದನೆ, ಹಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಝುಬೈರ್ ಸಿ.ಎ, ಹಿರಿಯ ಪ್ರಾಥಮಿಕ ಶಾಲಾ ಮಾತೃಸಂಘದ ಅಧ್ಯಕ್ಷೆ ಶಾರದಾ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಎಸ್ ಉಪಸ್ಥಿತರಿದ್ದು ಶುಭಹಾರೈಸುವರು.ಮುಖ್ಯೋಪಾಧ್ಯಾಯ ಗಣಪತಿ ರಮಣ ಪಿ, ಕುಂಬಳೆ ಸಂಸ್ಕೃತ ಅಕಾಡೆಮಿ ಕೌನ್ಸಿಲ್ ಕಾರ್ಯದಶರ್ಿ ಮಧುಶ್ಯಾಮ್ ವಿ ಮೊದಲಾದವರು ಉಪಸ್ಥಿತರಿರುವರು.
  ಶಿಬಿರದಲ್ಲಿ ಕುಂಬಳೆ ಉಪಜಿಲ್ಲೆಯ 250ಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಭಾಗವಹಿಸುವರು. ಶನಿವಾರ ಸಂಜೆ ಶಿಬಿರ ಸಮಾರೋಪಗೊಳ್ಳಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries