HEALTH TIPS

ಬದಿಯಡ್ಕದಲ್ಲಿ 25ಮಂದಿಗೆ ಕರಾಟೆಯಲ್ಲಿ ಬ್ಲೇಕ್ ಬೆಲ್ಟ್

 
       ಬದಿಯಡ್ಕ : ವಲ್ರ್ಡ್ ಟ್ರೆಡಿಶನ್ ಶೋಟೋಕೋನ್ ಕರಾಟೆ ಫೆಡರೇಶನ್ ವತಿಯಿಂದ ಬದಿಯಡ್ಕ ಚಿನ್ಮಯ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ 25 ಮಂದಿ ವಿದ್ಯಾರ್ಥಿಗಳು ಪ್ರಥಮ ಬ್ಲಾಕ್ ಬೆಲ್ಟ್ ಪಡೆದುಕೊಂಡರು. ವಿದ್ಯಾರ್ಥಿ ಮಧುಶ್ರೀ ಮಿತ್ರ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪ್ರಥಮ ರ್ಯಾಂಕ್ ಬೆಲ್ಟ್ ಪಡೆದ ವಿದ್ಯಾರ್ಥಿಗಳಾದ ನಾಮ್‍ದೇವ್ ಎ., ಶುಭದಾ, ತನುಶ್ರೀ ಭಟ್, ಆಶ್ಲೇಷ್ ಪಿ.ಎಸ್., ಅನುಕೇಶವ ಸಿ.ಯಚ್., ವಿಶ್ವಾತ್ಮ ಎನ್., ಸಾಯಿಪ್ರಣವ್, ಚಿತ್ತರಂಜನ್ ಕೆ, ಫಮೀಹ, ಅಭಿನವ್, ಆಶ್ಲೇಷ ಟಿ., ಮೇಘಾ ಆರ್., ಮೌಲ್ಯ ಲಕ್ಷ್ಮೀ ಕೆ., ಕೃತಿ ಎಸ್.ಪಿ., ಸಾಂದ್ರ ಸುಕುಮಾರ್, ಶ್ರವಣ ಎಂ. ಆರ್., ಸೃಜನ್ ಶೆಟ್ಟಿ ಬಿ., ಸುಬ್ರಹ್ಮಣ್ಯ ಎನ್., ಸಂವೇದ್, ಭುವನೇಶ್ವರೀ ಎಂ., ಡೆನ್ಸಿ ಲಿಲ್ಲಿ ಕ್ರಾಸ್ತಾ, ಶ್ರದ್ಧಾ ಆಳ್ವ, ಸುಚಿಂತ್ ಎಸ್., ಸುಜಾತ ಸಿ.ಯಚ್. ತೇರ್ಗಡೆಯಾಗಿ ಬ್ಲೇಕ್ ಬೆಲ್ಟ್ ಪಡೆದುಕೊಂಡರು. ಕರಾಟೆ ತರಬೇತುದಾರ ಬದಿಯಡ್ಕದ ಪಿ.ಕೆ ಆನಂದ್‍ರವರ ಶಿಷ್ಯರಾಗಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಹಾಗೂ ಡಿಸ್ಟ್ರಿಕ್ಟ್ ಕೌನ್ಸಿಲ್ ಕಾಸರಗೋಡಿನ ಅಧ್ಯಕ್ಷ ಹಮೀದ್ ರಹಿಮಾನ್ ಪಿ. ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬೆಲ್ಟ್‍ನ್ನು ವಿತರಿಸಿದರು. ಮುಖ್ಯ ತರಬೇತುದಾರರ ಸತ್ರಜಿತ್ ಚೌದರಿ ಪಾಲ್ಗೊಂಡು ಕರಾಟೆ ತರಬೇತಿಯನ್ನು ನೀಡಿದರು. ರಾಜ್ಯ ಶಿಕ್ಷಕ ಪುರಸ್ಕಾರ ವಿಜೇತೆ ಪ್ರಭಾವತಿ ಕೆದಿಲಾಯ, ಬದಿಯಡ್ಕ ಚಿನ್ಮಯ ಮಿಶನ್‍ನ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ ಪಿಲಿಂಗಲ್ಲು ಹಾಗೂ ಚಿನ್ಮಯ ವಿದ್ಯಾಲಯ ಬದಿಯಡ್ಕದ ಪ್ರಾಂಶುಪಾಲ ಪ್ರಶಾಂತ್ ಬೆಳಿಂಜೆ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries