HEALTH TIPS

ಇಂದು ಹಾಗೂ ನಾಳೆ ಕೆ.ಎಸ್.ಆರ್.ಟಿ.ಸಿ. ಸೇವೆಗಳ ನಿಯಂತ್ರಣ; 60 ರಷ್ಟು ಬಸ್ ಗಳು ಮಾತ್ರ ಸಂಚಾರ

                     

            ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ. ಇಂದು ಹಾಗೂ ನಾಳೆ ಸೇವೆಗಳಿಗೆ ನಿರ್ಬಂಧ ಹೇರಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಎರಡೂ ದಿನಗಳಲ್ಲಿ ಕೇವಲ 60 ರಷ್ಟು ಬಸ್‍ಗಳು ಮಾತ್ರ ಸೇವೆಯಲ್ಲಿರುತ್ತವೆ. ಸರ್ಕಾರದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.

          ಕೊರೋನಾ ವಿಸ್ತರಣೆಯ ಎರಡನೇ ಹಂತದ ಮೊದಲು, ಭಾನುವಾರದಂದು ಸುಮಾರು 2,300 ಬಸ್ಸುಗಳು ಸೇವೆಯಲ್ಲಿದ್ದವು. ಆದರೆ ಈ ದಿನಗಳಲ್ಲಿ 60 ಶೇ.ಸೇವೆಗಳನ್ನು ನಿರ್ವಹಿಸಲಾಗುತ್ತದೆ. ಹೈಯರ್ ಸೆಕೆಂಡರಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಮತ್ತು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಆಸ್ಪತ್ರೆಗಳಿಗೆ ಬರುವ ಪ್ರಯಾಣಿಕರಿಗೆ ಸೇವೆಗಳನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ಸಿಎಂಡಿ ಬಿಜು ಪ್ರಭಾಕರ್  ಹೇಳಿರುವರು.

                ಏತನ್ಮಧ್ಯೆ, ಕೆ.ಎಸ್.ಆರ್.ಟಿ.ಸಿಯ ಎಲ್ಲಾ ಉದ್ಯೋಗಿಗಳಿಗೆ ಶನಿವಾರ ರಜೆ ನೀಡಲಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries