HEALTH TIPS

ಉದ್ಯೋಗ ವಂಚನೆ ಪ್ರಕರಣ: ಸರಿತಾ ಎಸ್ ನಾಯರ್ ಬಂಧನ

             ಕಣ್ಣೂರು: ಸೋಲಾರ್ ವಂಚನಾ ಪ್ರಕರಣದ ಆರೋಪಿ ಸರಿತಾ ಎಸ್ ನಾಯರ್ ಅವರನ್ನು ಉದ್ಯೋಗ ಒದಗಿಸುವುದಾಗಿ ಹಣ ಪಡೆದ  ವಂಚನೆ ನಡೆಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ.  ಸರಿತಾಳನ್ನು ನಯ್ಯಾಟಿಂಗರ  ಸಬ್ ಇನ್ಸ್‍ಪೆಕ್ಟರ್ ಕಣ್ಣೂರು ಜೈಲಿನಲ್ಲಿ ಬಂಧಿಸಿದ್ದಾರೆ. ಸೋಲಾರ್ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಳಿಕ  ಸರಿತಾಳನ್ನು ನಿನ್ನೆ ಮತ್ತೆ ಹೊಸ ಪ್ರಕರಣ ಸಂಬಂಧ ಬಂಧಿಸಲಾಯಿತು.

             ಪುರಾತತ್ವ ಇಲಾಖೆಯಲ್ಲಿ ವಾಚ್ ಮೆನ್ ಕಮ್ ಅಟೆಂಡರ್  ಆಗಿ ಕೆಲಸ ನೀಡಬಹುದೆಂದು ತೋರಿಸಿ ಸರಿತಾ ಹಣವನ್ನು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರತಿವಾದಿ ಸರಿತಾ ಮತ್ತು ಶಾಜು ಅವರಿಗೆ ಈ ಹೆಸರಿನಿಂದ 3 ಲಕ್ಷ ರೂ. ಪಾವತಿಸಲಾಗಿದೆಯಾದರೂ ಉದ್ಯೋಗ ಸಂದರ್ಶನಕ್ಕೆ ಹಾಜರಾಗಲು ಅವಕಾಶವಿರಲಿಲ್ಲ. ಇದರ ಬಳಿಕ ಕನ್ಸ್ಯೂಮರ್ಫೆಡ್ನಲ್ಲಿ ನಾಲ್ಕನೇ ದರ್ಜೆಯ  ಪ್ಯೂನ್ ಆಗಿ ಶಾಶ್ವತ ನೇಮಕಾತಿಯ ಭರವಸೆ ನೀಡಲಾಯಿತು, ಆದರೆ ಅದು ಕೂಡ ಕೈಗೂಡಲಿಲ್ಲ. ಹಣದ ಬೇಡಿಕೆ ಇರಿಸಿದ್ದಾಗ ನೀಡಲಾದ ಚೆಕ್ ನ್ನು ಹಿಂದಿರುಗಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ.

            ಸೋಲಾರ್ ಪ್ಯಾನಲ್ ಅಳವಡಿಸುವ ನೆಪದಲ್ಲಿ 2.70 ಲಕ್ಷ ರೂ.ವನ್ನು ಈಕೆ ಈಗಾಗಲೇ ವಂಚಿಸಿ ಬಂಧನಕ್ಕೊಳಗಾಗಿದ್ದಾಳೆ.  ಈ ಪ್ರಕರಣದಲ್ಲಿ ಬಿಜು ರಾಧಾಕೃಷ್ಣನ್ ಮೊದಲ ಆರೋಪಿ ಮತ್ತು ಸರಿತ ಎರಡನೇ ಆರೋಪಿ. ಹಾಜರಾಗಲು ನಿರಾಕರಿಸಿದ್ದಕ್ಕಾಗಿ ಸರಿಖಾ ವಿರುದ್ಧ ಕೋಝಿಕೋಡ್ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ನ್ಯಾಯಾಲಯ ಗುರುವಾರ ಸರಿತಾಳನ್ನು ಕಸ್ಟಡಿಯಲ್ಲಿ ಇರಿಸಿತ್ತು.

            ಸರಿತಾಳ ವಿರುದ್ಧದ ಕೋಝಿಕೋಡ್ ಮೂಲದ ಅಬ್ದುಲ್ ಜಮೀಲ್ ಅವರ ಹಣವನ್ನು ಎಗರಿಸಿರುವ ಹೊಸ ದೂರು ಇದಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸೋಲಾರ್ ಕಂಪನಿ ಫ್ರಾಂಚೈಸಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದ ಸರಿತಳ ವಿರುದ್ಧದ ಪ್ರಕರಣವಾಗಿದ್ದು 2018 ರಲ್ಲಿ ವಿಚಾರಣೆ ಪೂರ್ಣಗೊಂಡ ದೂರಲ್ಲಿ ಈ ಬಂಧನ ನಡೆಸಲಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries