HEALTH TIPS

ಇ. ಶ್ರೀಧರನ್ ಸಕ್ರಿಯ ರಾಜಕೀಯದಿಂದಷ್ಟೇ ದೂರ, ಪಕ್ಷದಲ್ಲೇ ಮುoದುವರಿಯುವರು: ಅವರ ಸಲಹೆಗಳು ಪಕ್ಷಕ್ಕೆ ಅಗತ್ಯವಿದೆ:ಕೆ. ಸುರೇಂದ್ರನ್

                                            

                   ಪಾಲಕ್ಕಾಡ್: ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ಮೆಟ್ರೋಮ್ಯಾನ್ ಇ ಶ್ರೀಧರನ್ ಅವರ ನಿವಾಸಕ್ಕೆ ನಿನ್ನೆ ಭೇಟಿ ನೀಡಿದರು. ಇ ಶ್ರೀಧರನ್ ಸಕ್ರಿಯ ರಾಜಕಾರಣದಿಂದ ಮಾತ್ರ ನಿರ್ಗಮಿಸುತ್ತಿದ್ದಾರೆ ಎಂದು ಅವರ ಸಂದರ್ಶನದ ಬಳಿಕ ಸುರೇಂದ್ರನ್ ಸ್ಪಷ್ಟಪಡಿಸಿದರು. ಶ್ರೀಧರನ್ ಜೀವನ ಪಯರ್ಂತ ಬಿಜೆಪಿಯಲ್ಲೇ ಇರುತ್ತಾರೆ. ಅವರ ಸಲಹೆಗಳು ಬಿಜೆಪಿಗೆ ಮೌಲ್ಯಯುತವಾಗಿವೆ ಎಂದು ಕೆ ಸುರೇಂದ್ರನ್ ಹೇಳಿದ್ದಾರೆ.

                  ಇ. ಶ್ರೀಧರನ್ ಸೂಚನೆಯಂತೆ ಪಕ್ಷದಲ್ಲಿ ತಿದ್ದುಪಡಿಗಳು ನಡೆಯುತ್ತಿವೆ. ಅವರು ಪ್ರಸ್ತುತ ರಾಷ್ಟ್ರೀಯ ಮಂಡಳಿಗೆ ವಿಶೇಷ ಆಹ್ವಾನಿತರಾಗಿದ್ದಾರೆ. ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವರ ಆರೋಗ್ಯ ಅವಕಾಶ ನೀಡುತ್ತಿಲ್ಲ. ಅದಕ್ಕಾಗಿಯೇ ಶ್ರೀಧರನ್ ಅವರು ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಎಂದು ಸುರೇಂದ್ರನ್ ಹೇಳಿದರು.

                     ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಎಂದು ಶ್ರೀಧರನ್ ಮೊನ್ನೆ ಸ್ಪಷ್ಟಪಡಿಸಿದ್ದರು. ನಂತರ ಸುರೇಂದ್ರನ್ ಅವರ ಮನೆಗೆ ಭೇಟಿ ನೀಡಿದರು. ಮನೆಗೆ ತಲುಪಿದ ಶ್ರೀಧರನ್ ಅವರನ್ನು ಗೌರವಿಸಲಾಯಿತು. 90 ವರ್ಷ ಹರೆಯದ ವಯಸ್ಸಿನಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿರುವುದು ಅಪಾಯಕಾರಿ ಪರಿಸ್ಥಿತಿ. ಶ್ರೀಧರನ್ ನಿನ್ನೆ ಹೇಳಿದ್ದು ರಾಜಕೀಯದಲ್ಲಿ ಮೋಹವಿಲ್ಲ ಮತ್ತು ಸಕ್ರಿಯ ರಾಜಕಾರಣದಲ್ಲಿ ಉತ್ಸಾಹವಿಲ್ಲ ಎಮದು ಮಾತ್ರ ಎಂದು ಸುರೇಂದ್ರನ್ ಸ್ಪಷ್ಟಪಡಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries