HEALTH TIPS

ಗಣರಾಜ್ಯೋತ್ಸವ: ನೆಲ ಗುಡಿಸುವ ಮಾಪ್ ಗೆ ರಾಷ್ಟ್ರಧ್ವಜ ಕಟ್ಟಿ ಅವಮಾನ: ವಾರ್ಡ್ ಸದಸ್ಯನ ವಿರುದ್ಧ ಪ್ರತಿಭಟನೆ

                         ತ್ರಿಶೂರ್: ಗಣರಾಜ್ಯೋತ್ಸವದ ಅಂಗವಾಗಿ  ವಾರ್ಡ್ ಸದಸ್ಯರೊಬ್ಬರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆಯೂ ನಿನ್ನೆ ನಡೆದಿದೆ  ನೆಲ ಗುಡಿಸುವ ಮೊಪೆಡ್‍ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ ಸದಸ್ಯರೊಬ್ಬರು ಅವಮಾನಗೈದ ಘಟನೆ ತೃಶೂರಲ್ಲಿ ನಡೆದಿದೆ.  ತ್ರಿಶೂರ್ ಜಿಲ್ಲೆಯ ಮುಳ್ಳೂರ್ಕರ ಎಂಬಲ್ಲಿ ಈ ಘಟನೆ ನಡೆದಿದೆ.

                ಮಾಪ್ ನಲ್ಲಿ ಧ್ವಜಾರೋಹಣವನ್ನು ಪಂಚಾಯಿತಿಯ ವಾರ್ಡ್ ಸದಸ್ಯ ಕುಂಜಿಕೋಯ ನೆರವೇರಿಸಿದರು. ಕುಂಜಿಕೋಯ 12ನೇ ವಾರ್ಡ್ ಸದಸ್ಯ.  ಘಟನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮಾಪ್ ನಲ್ಲಿ ರಾಷ್ಟ್ರಧ್ವಜವನ್ನು ಕಟ್ಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

            ನಿನ್ನೆ ಬೆಳಗ್ಗೆ ಕಾಸರಗೋಡಿನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವ ಅಹ್ಮದ್ ದೇವರ ಕೋವಿಲ್ ಅವರು ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ಭಾರೀ ಟೀಕೆಗೆ ಕಾರಣವಾಗಿತ್ತು. ಇದಾದ ಬಳಿಕ ತ್ರಿಶೂರ್ ನಲ್ಲಿ ಸ್ವತಃ ಜನಪ್ರತಿನಿಧಿಯೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries