HEALTH TIPS

ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಮಗುವನ್ನು ಹಾಜರುಪಡಿಸಲು ಆದೇಶ, ನಿಜವಾದ ಪೋಷಕರ ಪತ್ತೆಗೆ ತನಿಖೆ


             ಕೊಚ್ಚಿ: ಕಲಮಸ್ಸೆರಿ ನಕಲಿ ಜನನ ಪ್ರಮಾಣಪತ್ರ ಪ್ರಕರಣದ ತನಿಖೆಗೆ ಸಿಡಬ್ಲ್ಯುಸಿ ಆದೇಶ ನೀಡಿದೆ.
           ಮಗುವನ್ನು ದತ್ತು ಪಡೆದಿರುವುದು ಅಕ್ರಮ ಎಂದು ತಿಳಿದುಬಂದಿದೆ. ಕೂಡಲೇ ಮಗುವನ್ನು ತಂದೊಪ್ಪಿಸುವಂತೆ ಮಕ್ಕಳ ರಕ್ಷಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಿಡಬ್ಲ್ಯುಸಿ ಅಧ್ಯಕ್ಷ ಕೆ.ಕೆ.ಶಾಜು ತಿಳಿಸಿದ್ದಾರೆ. ಮಗು ತ್ರಿಪುಣಿತುರಾ ಮೂಲದ ದಂಪತಿಯ ವಶದಲ್ಲಿದೆ. ಘಟನೆ ವಿವಾದವಾದ ಬಳಿಕ ಅವರು ತಲೆಮರೆಸಿಕೊಂಡಿದ್ದರು. ಮಗುವಿನ ನಿಜವಾದ ಪೆÇೀಷಕರನ್ನು ಪತ್ತೆ ಮಾಡುವಂತೆ ಪೆÇಲೀಸರಿಗೆ ಸೂಚಿಸಲಾಗಿದೆ. ಮೂಲ ಪೆÇೀಷಕರಿಗೆ ಮಗುವನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಮಗುವನ್ನು ಆರೈಕೆ ಕೇಂದ್ರಕ್ಕೆ ವರ್ಗಾಯಿಸಲು ಅWಅ ನಿರ್ಧರಿಸುತ್ತದೆ.
         ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯಿಸಿ, ಕಲಮಶ್ಶೇರಿ ವೈದ್ಯಕೀಯ ಕಾಲೇಜು ನೀಡಿದ ನಕಲಿ ಜನನ ಪ್ರಮಾಣ ಪತ್ರ ಪ್ರಕರಣ ಗಂಭೀರ ವಿಷಯ. ಜನನ ಪ್ರಮಾಣಪತ್ರವನ್ನು ರಚಿಸಲು ಪ್ರಯತ್ನಿಸುವುದು ಗಂಭೀರ ತಪ್ಪು. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯ ಹೊರತಾಗಿ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ತನಿಖೆಯಲ್ಲಿ ಹೆಚ್ಚಿನ ಅಂಶಗಳು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
         ಆಸ್ಪತ್ರೆಯ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಕಲಿ ಜನನ ಪ್ರಮಾಣ ಪತ್ರ ಯಾರಿಗಾಗಿ ಮಾಡಿದ್ದು, ಇದೇ ಮೊದಲ ಘಟನೆಯಾ, ಇದರ ಹಿಂದೆ ಒಳ-ಹೊರಗಿನವರಿದ್ದಾರೆಯೇ, ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆಯೇ, ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆಯೇ, ಮಗು ಕಿಡ್ನಾಪ್ ಆಗಿದೆಯೇ ಹೀಗೆ ಹಲವು ಪ್ರಶ್ನೆಗಳನ್ನು ಕೇಳಬೇಕಾಗಿದೆ. ಉತ್ತರಿಸಲಾಗುವುದು. ಸಮಗ್ರ ತನಿಖೆ ನಡೆಸಬೇಕು. ಆಸ್ಪತ್ರೆ ತನಿಖೆ ನಡೆಸುತ್ತಿದೆ. ಆದರೆ ಹೊರಗಿನ ಹಸ್ತಕ್ಷೇಪವನ್ನು ಕಂಡುಹಿಡಿಯಲು ಪೆÇಲೀಸರ ವಿಸ್ತೃತ ತನಿಖೆ ಅಗತ್ಯ' ಎಮದು ವೀಣಾ ಜಾರ್ಜ್ ಹೇಳಿದರು.
            ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು ಕಂಡು ಬಂದಿದೆ. ವಿಸ್ತೃತ ತನಿಖೆಯಿಂದ ಹೆಚ್ಚಿನ ಮಾಹಿತಿ ದೊರೆಯುವ ನಿರೀಕ್ಷೆ ಇದೆ. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries