HEALTH TIPS

ಸಂಘಿಯೆಂದು ಬಿಂಬಿಸುವುದಾದರೆ ಇರಲಿ: ನನ್ನ ನಂಬಿಕೆ ಮತ್ತು ನಿಲುವುಗಳಲ್ಲಿ ರಾಜಿ ಮಾಡಿಕೊಳ್ಳುವವಳಲ್ಲ: ಸುಜಯ ಪಾರ್ವತಿ


            ತ್ರಿಪುಣಿತುರ: ತಾನು ಸಂಘಿ ಎಂದು ಕರೆಸಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಪತ್ರಕರ್ತೆ ಸುಜಯ ಪಾರ್ವತಿ ಹೇಳಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನದಂದು ಬಿಎಂಎಸ್ ಎರ್ನಾಕುಳಂ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ತ್ರಿಪುನಿತುರಾದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಸುಜಯಾ ಮಾತನಾಡುತ್ತಿದ್ದರು.
            ನರೇಂದ್ರ ಮೋದಿಯವರ ಆಡಳಿತ ಭಾರತದಲ್ಲಿ ಬದಲಾವಣೆ ಉಂಟಾಗಿದೆ. ಮಹಿಳೆಯರ ಶಬರಿಮಲೆ ಪ್ರವೇಶದ ಸಂದರ್ಭದಲ್ಲಿ ವರದಿಗೆ ಹಾಜರಾಗಿರಲಿಲ್ಲ. ಮತ್ತು ತನ್ನ ನಂಬಿಕೆ ಮತ್ತು ಭಕ್ತಿಯೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧಳಿಲ್ಲ ಎಂದು ಸುಜಯ ಪಾರ್ವತಿ ಹೇಳಿದ್ದಾರೆ.
               'ಸಂಘಿ ಎಂಬುದು ಮಾಧ್ಯಮ ಕಾರ್ಯಕರ್ತರು ಬಿಎಂಎಸ್ ಕಾರ್ಯಕ್ರಮಕ್ಕೆ ಬಂದಾಗ ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಬಿಎಂಎಸ್ ವೇದಿಕೆಯಲ್ಲಿ ಭಾಗವಹಿಸುವ ಅವಕಾಶವಿದ್ದರೆ ತೆರಳಲು ಹಿಂಜರಿಕೆ ಇಲ್ಲ. ಸಿಐಟಿಯು ಮತ್ತು ಎಐಎನ್‍ಟಿಯುಸಿಯμÉ್ಟೀ ಗೌರವಿಸಬೇಕಾದ ಸಂಸ್ಥೆ ಬಿಎಂಎಸ್. ಕಳೆದ ಒಂಬತ್ತು ವರ್ಷಗಳಲ್ಲಿ ನಮ್ಮ ದೇಶ ಏನು ಸಾಧಿಸಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಿ. ಅದಕ್ಕೂ ಮೊದಲು ಹೇಗಿತ್ತು ಎಂದು ಯೋಚಿಸಿ. ಒಂಬತ್ತು ವರ್ಷಗಳ ಹಿಂದೆ ಸಮ್ಮೇಳನಕ್ಕೆ ಬಂದು ಇದನ್ನು ಕೇಳಿ ಚಪ್ಪಾಳೆ ತಟ್ಟುವ ಸ್ವಾತಂತ್ರ್ಯ ನಮಗಿತ್ತೇ. ಈಗ ಒಂದಾಗಿ ಕುಳ್ಳಿರಲು ಸಾಧ್ಯವಿತ್ತೇ? ಒಂಬತ್ತು ವರ್ಷಗಳು ಕಳೆದವು. ಭಾರತದ ಇತಿಹಾಸವನ್ನು ಮಾತ್ರವಲ್ಲದೆ ನಮ್ಮ ಜೀವನವನ್ನೂ ಬದಲಾಯಿಸಿದೆ.
              'ಕೇರಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ನಮ್ಮ ರಾಜ್ಯದಲ್ಲಿ ಪ್ರತಿದಿನ 47 ಮಹಿಳೆಯರು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ನಾನು ಯುಪಿ ಅಥವಾ ಗುಜರಾತ್ ಬಗ್ಗೆ ಮಾತನಾಡುತ್ತಿಲ್ಲ. ಕೇರಳದ ಬಗ್ಗೆ ಎಷ್ಟು ಜನ ನಿಮ್ಮ ಮುಂದೆ ಬಂದು ಹೀಗೆ ಹೇಳಬಹುದು. ಪ್ರತಿ ಬಾರಿ ಘಟನೆ ವರದಿಯಾದಾಗಲೂ ಬಿಸಿ ಬಿಸಿ ಚರ್ಚೆಗಳು ನಡೆಯುತ್ತವೆ. ಪಕ್ಷಗಳಲ್ಲಿ ಉದ್ಭವಿಸುವ ಕುಂದುಕೊರತೆಗಳನ್ನು ಪಕ್ಷದ ನ್ಯಾಯಾಲಯಗಳು ತನಿಖೆ ಮಾಡುತ್ತವೆ. ಕೇರಳದಲ್ಲಿ ಮಹಿಳೆಯರ ಸುರಕ್ಷತೆ ಎಲ್ಲಿದೆ? ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ಚರ್ಚೆ ನಡೆದಾಗ ನಾನು ಶಬರಿಮಲೆ ಬಗ್ಗೆ ವರದಿ ಮಾಡಲು ಹೋಗುವುದಿಲ್ಲ ಎಂಬ ನಿಲುವು ತಳೆದಿದ್ದೆ. ಇದರಿಂದಾಗಿ ಕೆಲಸದ ಸ್ಥಳಗಳಲ್ಲಿ ವಿರೋಧವನ್ನು ಎದುರಿಸಬೇಕಾಯಿತು. ಆದರೆ ಅದು ನನ್ನ ನಿಲುವು, ನನ್ನ ನಂಬಿಕೆ. ನನ್ನ ನಂಬಿಕೆ, ಧೋರಣೆಗಳಿಗೆ ಧಕ್ಕೆ ತಂದು ಯಾವುದೇ ಸಾಧನೆ ಬೇಡ ಎಂದು ನಿರ್ಧರಿಸಿದ್ದೆ’ ಎಂದು ಸುಜಯ ಹೇಳಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries