HEALTH TIPS

ಜಾನಪದ ಗೀತೆ ಸ್ಪರ್ಧೆಯ ಕಡೆಗಣನೆ, ಕಳಪೆ ಧ್ವನಿ ವ್ಯವಸ್ಥೆ: ಪ್ರತಿಭಟನೆ

               ಕೊಲ್ಲಂ:ರಾಜ್ಯ ಕಲೋತ್ಸವದಲ್ಲಿ ಜಾನಪದ ಗೀತೆ ಸ್ಪರ್ಧೆ ವೇಳೆ ಮೈಕ್ ಕಳಪೆಮಟ್ಟದ್ದಾದ ಕಾರಣ ತರಬೇತುದಾರರು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಜನಪದ ಗೀತೆಗಳನ್ನು ಹಾಡಲು ಅಡೆತಡೆಗಳಿದ್ದು, ಧ್ವನಿ ವ್ಯವಸ್ಥೆಯೂ ಸೂಕ್ತವಾಗಿಲ್ಲ ಎಂದು ಪ್ರತಿಭಟನೆಯಲ್ಲಿ ಗಮನ ಸೆಳೆದರು.

           ಸ್ಪರ್ಧೆ ಆರಂಭವಾದ ಬಳಿಕ ಸೌಂಡ್ ಸಿಸ್ಟಂನಲ್ಲಿ ಲೋಪವಾಗಿದೆ ಎಂಬ ದೂರು ಕೇಳಿಬಂದಿತ್ತು.

            ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಗೀತೆ ತರಬೇತಿ ನೀಡಿದ ಶಿಕ್ಷಕರು ಪ್ರತಿಭಟನೆಯೊಂದಿಗೆ ಆಗಮಿಸಿ ಧರಣಿ ನಿರತರಾದರು. ಪೋಲೀಸರು ಮತ್ತು ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರನ್ನು ತಡೆದರು. ಆದರೆ ಘಟನೆಯಲ್ಲಿ ಅಧಿಕಾರಿಗಳ ಮಧ್ಯಸ್ಥಿಕೆ ಸಮರ್ಪಕವಾಗಿಲ್ಲ. ಪೆÇಲೀಸರನ್ನು ಬಳಸಿಕೊಂಡು ಕೊನೆಗಾಣಿಸುವ ಪ್ರಯತ್ನಗಳು ನಡೆದಿವೆ.

           ಆದರೆ ನಾಲ್ಕನೇ ಮಹಡಿಯಲ್ಲಿ ಸ್ಪರ್ಧೆಗೆ ವೇದಿಕೆ ಮಂಜೂರು ಮಾಡಿರುವುದು ಜನಪದ ಗೀತೆಯನ್ನೂ ಕಡೆಗಣಿಸಿದ್ದರ ಸೂಚಕ ಎನ್ನಲಾಗಿದೆ. ಜನಪದ ಗೀತೆ ಸ್ಪರ್ಧೆಗೆ ಅನನುಕೂಲ ಸ್ಥಳ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries