HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಮಾನ್ಯ ಅಯ್ಯಪ್ಪ ಮಂದಿರ ಪ್ರತಿಷ್ಠಾ ವಾಷರ್ಿಕೋತ್ಸವ
   ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾದಿನ ಹಾಗೂ 36ನೇ ವಾಷರ್ಿಕೋತ್ಸವವು ಡಿ. 25 ಹಾಗೂ 30ನೇ ತಾರೀಕುಗಳಂದು ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
  ಡಿ. 25ರಂದು ಪ್ರತಿಷ್ಠಾದಿನದ ಅಂಗವಾಗಿ ದೀಪ ಪ್ರತಿಷ್ಠೆ, ಶರಣು ಕರೆಯುವುದು, ಗಣಪತಿ ಹವನ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿರುವುದು. 30ರಂದು ಪ್ರಾತಃಕಾಲ 5ಗಂಟೆಗೆ ದೀಪ ಪ್ರತಿಷ್ಠೆ, ಶರಣು ಕರೆಯುವುದು ಬಳಿಕ ಗಣಪತಿ ಹವನ ನಡೆಯಲಿದೆ. ಬಳಿಕ  ಶ್ರೀ ಅಯ್ಯಪ್ಪ ಭಜನಾ ಸಂಗ ಮಾನ್ಯ, ವೃಂದಾವನ ಬಾಲಗೋಕುಲ ಮಾನ್ಯ, ಅರುಣೋದಯ ನವಜೀವನ ಭಜನಾ ಸಮಿತಿ ಮಾನ್ಯ ಹಾಗೂ ಆಟರ್್ ಆಫ್ ಲಿವಿಂಗ್ ಬದಿಯಡ್ಕ ಘಟಕದ ವತಿಯಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮವು ನಡೆಯಲಿದ್ದು ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನದಾನ ನಡೆಯಲಿದೆ.
ಸಂಜೆ 5ಗಂಟೆಯಿಂದ ಕಲಾನಿಲಯಂ ಸಜಿತ್ ಹಾಗೂ ಸುಕುಮಾರ ಪಣಿಕ್ಕರ್, ಬಾರಿಕ್ಕಾಡು ಇವರಿಂದ ತಾಯಂಬಕ, ಶ್ರೀ ಆದಿಶಕ್ತಿ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಕುಂಟಾಲ್ ಮೂಲೆ, ಶ್ರೀ ಗೋಪಾಲಕೃಷ್ಣ ಭಜನಾ ಸಂಘ ನೆಕ್ರಾಜೆ ಇವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಡುವರು. ರಾತ್ರಿ 8ಕ್ಕೆ ಮಾನ್ಯ ವೆಂಕಟ್ರಮಣ ದೇವಸ್ಥಾನದಿಂದ ಭಜನಾ ಮಂದಿರಕ್ಕೆ ಹುಲ್ಪೆ ಮೆರವಣಿಗೆಯನ್ನೂ ಆಯೋಜಿಸಲಾಗಿದ್ದು ಮೆರವಣಿಗೆಯಲ್ಲಿ ದೇವರಕೆರೆ ಸ್ವಸ್ತಿಕ್ ನಾಸಿಕ್ ಬ್ಯಾಂಡ್ ಸಂಘದವರಿಂದ ನಾಸಿಕ್ ಬ್ಯಾಂಡ್ ಮೆರವಣಿಗೆಯಲ್ಲಿ ಇರಲಿದೆ. ರಾತ್ರಿ 9.30ಕ್ಕೆ ಮಹಾಪೂಜೆಯು ಜರುಗಲಿದ್ದು ಶ್ರೀ ದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿ ಕೊಲ್ಲಂಗಾನ ಇವರಿಂದ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಜರಗಲಿರುವುದು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries