HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಶುಚಿತ್ವದಿಂದ ಸಾಮಾಜಿಕ ಆರೋಗ್ಯ : ಹಷರ್ಾದ್ ವಕರ್ಾಡಿ
   ಮಂಜೇಶ್ವರ: ಶುಚಿತ್ವದ ಬಗ್ಗೆ ಸಾಮಾಜಿಕ ಕ್ರಾಂತಿಯುಂಟಾಗಬೇಕಾಗಿದೆ. ಪ್ಲಾಸ್ಟಿಕ್ ನಿಮರ್ೂಲನದಿಂದ ಆರೋಗ್ಯಕರ ಸಮಾಜ ನಿಮರ್ಾಣ ಸಾಧ್ಯ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಹೇಳಿದರು.
    ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ ವತಿಯಿಂದ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಸಹಾಯಿ ಯೋಜನೆಯ ಸಹಯೋಗದೊಂದಿಗೆ ವಕರ್ಾಡಿ ಮಜೀರ್ಪಳ್ಳದಲ್ಲಿ ಭಾನುವಾರ ಜರುಗಿದ ಶ್ರಮದಾನ ಹಾಗೂ ಜನಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಸ್ವಚ್ಛತೆಯಿಂದ ಸಾಮಾಜಿಕ ಆರೋಗ್ಯ ನಿಮರ್ಾಣ ಸಾಧ್ಯ. ಪರಿಸರ ಸ್ವಚ್ಛತೆ ಮನುಷ್ಯ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಹೇಳಿದರು.ವ್ಯಕ್ತಿ, ಸಮಾಜದ ಅಂತರಾಳದಲ್ಲಿ ಸ್ವಚ್ಚತೆಯ ಬಗ್ಗೆ ಆಂದೋಲನಗಳೇರ್ಪಟ್ಟು, ಅದು ಬದುಕಿನ ಪ್ರಮುಖ ಭಾಗವಾದಾಗ ಸ್ವಚ್ಚ ಪರಿಕಲ್ಪನೆ ಕ್ರಿಯಾತ್ಮಕವಾಗಿ ಸಾಕಾರಗೊಳ್ಳುತ್ತದೆ ಎಂದು ಅವರು ತಿಳಿಸಿದರು.
  ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಮತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಸೋಮಪ್ಪ, ಪಂಚಾಯತು ಮಾಜೀ ಅಧ್ಯಕ್ಷ ಬಿ.ಮೊಹಮ್ಮದ್ ಕುಂಞ,  ಸೈಂಟ್ ಅಲೋಶಿಯಸ್ ಕಾಲೇಜು ಉಪನ್ಯಾಸಕಿ ಮರಿಯಾ ಶೈಲಾ, ಮಾಜೀ ಷಂಚಾಯತು ಸದಸ್ಯ ಮೊಹಮ್ಮದ್ ಮಜಾಲು, ಶ್ರೀಕಾಂತ್ ಹೊಳ್ಳ ಕಜೆಕೋಡಿ, ಡಾ. ಬಾಲಸುಬ್ರಹ್ಮಣ್ಯ ಭಟ್, ಪ್ರೀತಿ ಬಲಿಪಗುಳಿ,ಜೋಸೆಫ್ ಮಾಸ್ತರ್, ತೆರೆಸಾ ಟೀಚರ್, ಪ್ರಭಾಕರ್ ಮಜೀರ್ಪಳ್ಳ, ಶರೀಫ್ ಅರಿಬೈಲು ಮುಂತಾದವರು ಉಪಸ್ಥಿತರಿದ್ದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries