HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮಾ.23ರಂದು ಗೋವಿಂದ ಪೈ ಜನ್ಮದಿನಾಚರಣೆ 
     ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜನ್ಮ ದಿನಾಚರಣೆಯು ಮಾ.23ರಂದು ಮಂಜೇಶ್ವರದ ಗಿಳಿವಿಂಡು ಸಭಾಂಗಣದಲ್ಲಿ  ಜರಗಲಿದೆ. ಕಾರ್ಯಕ್ರಮವನ್ನು  ಅಪರಾಹ್ನ  3 ಗಂಟೆಗೆ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ನಿವೃತ್ತ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಉದ್ಘಾಟಿಸುವರು.
  ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ  ಅಬ್ದುಲ್ ಅಜೀಜ್ ಹಾಜಿ ಅಧ್ಯಕ್ಷತೆ ವಹಿಸುವರು. ಬಿ.ವಿ.ಕಕ್ಕಿಲ್ಲಾಯ, ಡಾ.ಕೆ.ಕಮಲಾಕ್ಷ , ಡಾ.ರಮಾನಂದ ಬನಾರಿ, ಎಂ.ಜೆ.ಕಿಣಿ, ಡಿ.ಎಂ.ಕುಲಾಲ್, ಸುಪ್ರಿಯಾ ಶೆಣೈ, ಡಾ.ಸುನಿಲ್ ಜೋನ್, ಸುಭಾಶ್ಚಂದ್ರ ಕಣ್ವತೀರ್ಥ ಮೊದಲಾದವರು ಶುಭಹಾರೈಸುವರು.
   ಕಾರ್ಯಕ್ರಮದ ಅಂಗವಾಗಿ ಡೊಳ್ಳುಕುಣಿತ, ವೀರಗಾಸೆ, ಜಾದೂ ನೃತ್ಯ, ಹುಲಿ ಕುಣಿತ ಸಹಿತ ಮಕ್ಕಳಿಂದ ಮನೋರಂಜನಾ ವೈವಿಧ್ಯ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries