HEALTH TIPS

ಅರಂತೋಡು ವಾರ್ಷಿಕ ಜಾತ್ರಾ ಉತ್ಸವ

ಮಧೂರು: ಅರಂತೋಡು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಉತ್ಸವ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ, 8 ರಿಂದ ಶತರುದ್ರಾಭಿಷೇಕ ನಡೆಯಿತು. ಬಳಿಕ 10.30ರಿಂದ ಕಾಸರಗೋಡಿನ ಪದ್ಮಪ್ರಿಯ ಮಹಿಳಾ ಭಜನಾ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. 11ಕ್ಕೆ ನವಕಾಭಿಷೇಕ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ವಿತರಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯುವ ಕಲಾವಿದರಿಂದ ಯಕ್ಷ=ಗಾನ=ವೈಭವ ಪ್ರಸ್ತುತಗೊಂಡಿತು. ರವಿಶಂಕರ ಚೇನಕ್ಕೋಡು, ನಾರಾಯಣ ತುಂಗ(ಭಾಗವತಿಕೆ), ಗೋಪಾಲಕೃಷ್ಣ ನಾವಡ, ಮುರಳೀ ಮಾಧವ ಮಧೂರು(ಚೆಂಡೆ ಹಾಗೂ ಮೃದಂಗ)ದಲ್ಲಿ ಸಹಕರಿಸಿದರು. ರವಿಶಂಕರ ತುಂಗ ಬನ್ನೂರು ನಿರೂಪಕರಾಗಿ ಸಹಕರಿಸಿದರು. ಸಂಜೆ 5 ರಿಂದ ಭಜನಾ ಸಂಕೀರ್ತನೆ, 6.30ಕ್ಕೆ ದೀಪಾರಾಧನೆ ನಡೆಯಿತು. ಬಳಿಕ 7 ರಿಂದ ಸಾಮೂಹಿಕ ಕಾರ್ತಿಕ ಪೂಜೆ, ಶ್ರೀಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀವಿಷ್ಣುಮೂರ್ತಿ, ರಕ್ತೇಶ್ವರಿ ದೈವಗಳಿಗೆ ತಂಬಿಲ ಸೇವೆ, ಅನ್ನದಾನ ನಡೆಯಿತು. ಇಂದು ಬೆಳಿಗ್ಗೆ 8ಕ್ಕೆ ಶ್ರೀವಿಷ್ಣುಮೂರ್ತಿ ದೈವ ಕೋಲದೊಂದಿಗೆ ಉತ್ಸವ ಸಮಾರೋಪಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries