HEALTH TIPS

ಹುತಾತ್ಮರಾದ ವೀರ ಯೋಧರಿಗೆ *ಗೌರವ ನಮನ*-ಕವನ

ಗುರುವಾರ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದವೀರ ಯೋಧರನ್ನು ನೆನೆದು ಶಿಕ್ಷಣ ತಜ್ಞ, ಕವಿ, ಗಮಕಿ ವಿ.ಬಿ.ಕುಳಮರ್ವ ಅವರು ರಚಿಸಿದ ಗೌರವ ನಮನದ ಕವನ ಓದುಗರಿಗೆ-ದೇಶ ಪ್ರಜ್ಞೆಯ ಜಾಗೃತಿಗೆ *~~~~~~~~~~~~~~~* ಭಾರತ ದೇಶದ ಪ್ರಜೆಗಳೆ ಕೇಳಿರಿ ಉಗ್ರರ ಧಾಳಿಯ ಖಂಡಿಸಿರಿ || ( ಪಲ್ಲವಿ) ಸಂತಸದಿಂದಲಿ ರಜೆಯನು ಕಳೆಯುತ ಮುಂದಿನ ಕಾರ್ಯಕೆ ಅಡಿಯಿಡಲು | ಊರನು ತೊರೆಯುತ ಕ್ಷೇತ್ರಕೆ ಸಾಗಲು ಎರಗಿದ ಉಗ್ರರು ರಕ್ಕಸರು || || 1 || ದಹಿಸಿತು ಅಗ್ನಿಯು ದೇಹವ ಬಿಡದೆ ಹೊಸಕಿತು ವೀರರ ಪ್ರಾಣವನು| ಹಗಲಿರುಳೆನ್ನದೆ ಮಳೆಚಳಿಯೆನ್ನದೆ ದೇಶವ ಕಾಯುವ ಯೋಧರನು|| || 2 || ಎದುರಿಗೆ ನಿಲ್ಲಲು ಧೈರ್ಯವು ಸಾಲದೆ ಮೋಸದಿ ಯೋಧರ ಸುಟ್ಟವರ| ಪಾತಕಿಯುಗ್ರರ ದಮನಕೆ ಪಣವನು ಇಂದೇ ಗೈಯ್ಯುವ ನಾವೆಲ್ಲ || || 3 || ಉಗ್ರರ ಧಾಳಿಯ ಖಂಡಿಸ ಬೇಕು ರಕ್ಕಸ ನರರನು ಶಿಕ್ಷಿಸ ಬೇಕು | ಭಾರತ ಯೋಧರ ಅಮೂಲ್ಯ ಜೀವಕೆ ತಲೆಯನು ಬಾಗುತ ನಮಿಸಲು ಬೇಕು || || 4 || ಕಟ್ಟಲು ಬೇಕು ಸದೃಢ ರಾಷ್ಟ್ರವ ಮೆಟ್ಟುತ ಧೈರ್ಯದಿ ಉಗ್ರರನು| ದ್ರೋಹವನೆಸಗುವ ದುಷ್ಟರ ದನುಜರ ಬದುಕಲು ಬಿಡದೆ ಹೊಸಕುವುದು || || 5 || ಭಾರತ ಮಾತೆಯ ವೀರ ಕುಮಾರರ ಚೇತನಕಾರತಿ ಬೆಳಗುವೆವು | ಮರುಗದೆ ಮುಂದಿನ ಕಾರ್ಯವನೆಸಗಲು ಗೌರವ ನಮನವ ಸಲಿಸುವೆವು|| || 6 || (ತಾ - 14- 2 - 2019 ರಂದು ಉಗ್ರರ ವಿಕೃತ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಯೋಧರ ದಿವ್ಯಾತ್ಮಗಳಿಗೆ ಚಿರಶಾಂತಿಯನ್ನು ಕೋರುತ್ತಾ ಈ ಗೌರವ ನುಡಿ ನಮನವನ್ನು ಸಲ್ಲಿಸುತ್ತೇನೆ) *ರಚನೆ* *ವಿ.ಬಿ.ಕುಳಮರ್ವ, ಕುಂಬ್ಳೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries