ಬೆಚ್ಚಿ ಬೀಳಿಸಿದ ನಾಲ್ಕು ಕೋಟಿ-ಹುಟುಕಾಟದಲ್ಲಿ ಹೈರಾಣರಾದ ನಾಗರಿಕರು!
0
ಮಾರ್ಚ್ 21, 2019
ಮುಳ್ಳೇರಿಯ: ಕೇರಳ ರಾಜ್ಯ ಲಾಟರಿಯ ಗುರುವಾರ ಪ್ರಕಟಗೊಂಡ ಸಮ್ಮರ್ ಬಂಪರ್ ಲಾಟರಿಯಲ್ಲಿ 4 ಕೋಟಿಯ ಪ್ರಥಮ ಬಹುಮಾನ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮುಳ್ಳೇರಿಯ ಪ್ರದೇಶ ವ್ಯಾಪ್ತಿಯಲ್ಲಿ ದೊರಕಿದ್ದು, ಟಿಕೆಟ್ ಪಡೆದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ.
ಗುರುವಾರ ಮಧ್ಯಾಹ್ನ ಪ್ರಕಟಗೊಂಡ ಸಮ್ಮರ್ ಬಂಪರ್ ಲಾಟರಿಯಲ್ಲಿ ಎಸ್ಬಿ 131399 ಸಂಖ್ಯೆಗೆ 4 ಕೋಟಿ ರೂ.ಗಳ ಪ್ರಥಮ ಬಹುಮಾನ ಪ್ರಕಟಗೊಂಡಿದೆ. ಆದರೆ ಈ ಲಾಟರಿ ಖರೀಧಿಸಿದ ಲಕ್ಕೀ ಮ್ಯಾನ್ ಯಾರೆಂದು ಗುರುವಾರ ರಾತ್ರಿಯ ವರೆಗೂ ಪತ್ತೆಯಾಗದೆ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರ ಭಾವಚಿತ್ರಗಳೊಂದಿಗೆ ಇವರಿಗೆ ಲಭ್ಯವಾಗಿದೆ ಎಂಬ ವದಂತಿಗಳಿದ್ದರೂ ನೈಜ ವ್ಯಕ್ತಿಯ ಹುಡುಕಾಟ ಮುಂದುವರಿದಿದೆ.ಈ ಮಧ್ಯೆ ಸುಳ್ಯ ಕೇಂದ್ರೀಕರಿಸಿದ ವ್ಯಕ್ತಿಯೋರ್ವರು ಈ ಲಾಟರಿ ಖರೀದಿಸಿರಬೇಕು ಎಂದು ಸಂಶಯಿಸಲಾಗಿದೆ.

