HEALTH TIPS

ವಾಚನಾ ಸಪ್ತಾಹ ಸಮಾರೋಪ ಸಮಾರಂಭ

                 
     ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಸಪ್ತಾಹದ ಸಮಾರೋಪ ಸಮಾರಂಭ ಶಾಲೆಯ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಮಂಗಳವಾರ ಜರಗಿತು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ವಿ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಜಿಬೈಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ ಬಂಗೇರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಅಧ್ಯಾಪಕರಾದ ನಾರಾಯಣ ಯು,  ಶಾಲಾ ನೌಕರ ಸಂಘದ ಕಾರ್ಯದರ್ಶಿ ರತ್ನಾವತಿ ಟೀಚರ್ ಹಾಗೂ ಶಾಲಾ ಅಧ್ಯಾಪಿಕೆ ನಳಿನಿ ಟೀಚರ್ ಉಪಸ್ಥಿತರಿದ್ದರು.
     ಈ ಸಂದರ್ಭದಲ್ಲಿ ವಾಚನಾ ವಾರದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಅಧ್ಯಾಪಕ ಸುನಿಲ್ ಕುಮಾರ್ ಬಹುಮಾನ ವಿತರಣಾ ಕಾಂiÀರ್iಕ್ರಮ ನಡೆಸಿಕೊಟ್ಟರು. ಅಧ್ಯಾಪಿಕೆ ರಾಧಮಣಿ ಬಿ. ಸ್ವಾಗತಿಸಿ, ಅಧ್ಯಾಪಕ ಅಶೋಕ್ ಕುಮಾರ್ ಡಿ. ವಂದಿಸಿದರು.ಶಿಕ್ಷಕ ಮಹಾಬಲೇಶ್ವರ ಭಟ್ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries