ಒಂಬತ್ತನೆಯ ಸಂಧಿ
ಸೂಚನೆ :ರಣಭಯಂಕರ ಹನುಮನಾ ದಿನ
ಮಣಿಕುಲೇಂದ್ರಂಗಮಲ ಚೂಡಾ
ಮಣಿಯ ತಂದಿತ್ತನು ಸುರೇಂದ್ರಾದಿಗಳು ನಲಿದಾಡೆ
ಅಱಸದಿರಿ ಬೇಱತ್ತಲಿತ್ತಲು
ತೆಱಪುದೋಱುವೆ ನೋಡಿ ಸಮರವ
ಮೆಱೆವುದುಳ್ಳಡೆ ಮೈಗೂಡುವುದಗ್ಗಳಿಕೆ ನಿಮಗೆನುತ
ಅಱಿಚಲಳಿದುಳಿದಸುರಪಡೆ ಮು
ಕ್ಕುಱಿಕೊಂಡುದು ಬೆಟ್ಟವನು ಕ
ಟ್ಟಿಱುಹೆ ಕವಿವಂದದಲಿ ಕವಿದುದು ಕೂಡೆ ಖಳನಿಖರ||೨||
ಕುಶನೆ ಕೇಳೈ ಕುಲಿಶಹತಿ ನೋ
ಯಿಸಲು ನೆರೆಯದ ಹನುಮನುಱೆ ಕಂ
ಪಿಸುವನೇ ಖಳರಿಱಿತದಲಿ ಲವ ಕೇಳುಕೌತುಕವ
ಮುಸುಕುವತಿಬಲರಕ್ಕಸರ ಕ
ರ್ಕಶರಾಗ್ರನಿಘಾತದಿಂದೆ
ಬ್ಬಿಸಿದನಂತಕಪುರಿಗೆ ನಿಮಿಷದಲಾ ಸಮೀರಸುತ||೩||
ಅದೆ ಬರವು ಪವಮಾನಜನ ಜಯ
ವದನವಿಕಸಿತ ವಿಸ್ತರಣದ
ಭ್ಯುದಯ ಮುಖವೆಮಗಱುಹುತದೆಯೆಂದಖಿಳಕಪಿಸೇನೆ
ತುದಿವೆರಳ ಬೊಬ್ಬೆಗಳತಿಗಗಳ
ತದಹದಬ್ಬರವಱೆಯಲೀತನ
ನಿದಿರುಗೊಂಡಪ್ಪಿದರು ನಮಿಸಿದ ಜಾಂಬವಂತಂಗೆ ||೭||
ವೀರ ಬಂದೈ ಸ್ವಾಮಿಕಾರ್ಯೋ
ದ್ಧಾರ ಬಂದೈ ಕೀಶಕುಲವನ
ವಾರಿರುಹದಿನನಾಥ ಬಂದೈ ತಂದೆಯೆಂದೆನುತ
ಸೋರುವಾನಂದಾಶ್ರುಪುಳಕದ
ಪೂರಣದಲೆತ್ತಿದನು ಪವನಕು
ಮಾರಕನ ಮಸ್ತಕವ ನಲಿದೊಲಿದಬುಜಭವಸೂನು ||೮||
ಏನ ಮಾಡಿದೆಯೆಂದು ಕಲಿಪವ
ಮಾನಜನನಾ ಕಮಲಗರ್ಭನ
ಸೂನು ಬೆಸಗೊಂಡನು ಮುಗುಳ್ನಗೆ ಮುಖದೊಳವತರಿಸೆ
ಏನನೆನಗೆ ನಿರೂಪಿಸಿದಿರದ
ರಾನಿಕೆಯಲೇ ಹೋಗಿ ಕಂಡೆನು


