HEALTH TIPS

ಸಮರಸ-ತೊರವೆ ರಾಮಾಯಣ-ಸಂಚಿಕೆ-07-ಕವಿ-ಕುಮಾರ ವಾಲ್ಮೀಕಿ

ಒಂಬತ್ತನೆಯ ಸಂಧಿ

ಸೂಚನೆ :ರಣಭಯಂಕರ ಹನುಮನಾ ದಿನ
ಮಣಿಕುಲೇಂದ್ರಂಗಮಲ ಚೂಡಾ
ಮಣಿಯ ತಂದಿತ್ತನು ಸುರೇಂದ್ರಾದಿಗಳು ನಲಿದಾಡೆ

ಅಱಸದಿರಿ ಬೇಱತ್ತಲಿತ್ತಲು
ತೆಱಪುದೋಱುವೆ ನೋಡಿ ಸಮರವ
ಮೆಱೆವುದುಳ್ಳಡೆ ಮೈಗೂಡುವುದಗ್ಗಳಿಕೆ ನಿಮಗೆನುತ
ಅಱಿಚಲಳಿದುಳಿದಸುರಪಡೆ ಮು
ಕ್ಕುಱಿಕೊಂಡುದು ಬೆಟ್ಟವನು ಕ
ಟ್ಟಿಱುಹೆ ಕವಿವಂದದಲಿ ಕವಿದುದು ಕೂಡೆ ಖಳನಿಖರ||೨||

ಕುಶನೆ ಕೇಳೈ ಕುಲಿಶಹತಿ ನೋ
ಯಿಸಲು ನೆರೆಯದ ಹನುಮನುಱೆ ಕಂ
ಪಿಸುವನೇ ಖಳರಿಱಿತದಲಿ ಲವ ಕೇಳುಕೌತುಕವ
ಮುಸುಕುವತಿಬಲರಕ್ಕಸರ ಕ
ರ್ಕಶರಾಗ್ರನಿಘಾತದಿಂದೆ
ಬ್ಬಿಸಿದನಂತಕಪುರಿಗೆ ನಿಮಿಷದಲಾ ಸಮೀರಸುತ||೩||

ಅದೆ ಬರವು ಪವಮಾನಜನ ಜಯ
ವದನವಿಕಸಿತ ವಿಸ್ತರಣದ
ಭ್ಯುದಯ ಮುಖವೆಮಗಱುಹುತದೆಯೆಂದಖಿಳಕಪಿಸೇನೆ
ತುದಿವೆರಳ ಬೊಬ್ಬೆಗಳತಿಗಗಳ
ತದಹದಬ್ಬರವಱೆಯಲೀತನ
ನಿದಿರುಗೊಂಡಪ್ಪಿದರು ನಮಿಸಿದ ಜಾಂಬವಂತಂಗೆ ||೭||

ವೀರ ಬಂದೈ ಸ್ವಾಮಿಕಾರ್ಯೋ
ದ್ಧಾರ ಬಂದೈ ಕೀಶಕುಲವನ
ವಾರಿರುಹದಿನನಾಥ ಬಂದೈ ತಂದೆಯೆಂದೆನುತ
ಸೋರುವಾನಂದಾಶ್ರುಪುಳಕದ
ಪೂರಣದಲೆತ್ತಿದನು ಪವನಕು
ಮಾರಕನ ಮಸ್ತಕವ ನಲಿದೊಲಿದಬುಜಭವಸೂನು ||೮||

ಏನ ಮಾಡಿದೆಯೆಂದು ಕಲಿಪವ
ಮಾನಜನನಾ ಕಮಲಗರ್ಭನ
ಸೂನು ಬೆಸಗೊಂಡನು ಮುಗುಳ್ನಗೆ ಮುಖದೊಳವತರಿಸೆ
ಏನನೆನಗೆ ನಿರೂಪಿಸಿದಿರದ
ರಾನಿಕೆಯಲೇ ಹೋಗಿ ಕಂಡೆನು
ಜಾನಕಿಯ ಬಳಿಕಿತ್ತೆನವರಿಗೆ ರಾಮಮುದ್ರಿಕೆಯ ||೧೦||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries