HEALTH TIPS

ಸಾಕ್ಷರತಾ ಮಿಷನ್- ತತ್ಸಮಾನ ತರಬೇತಿ: ನೋಂದಣಿ ಆರಂಭ


                 
   ಕಾಸರಗೋಡು:  ರಾಜ್ಯ ಸಾಕ್ಷರತಾ ಮಿಷನ್ನಡೆಸುವ ಹತ್ತನೇ ತರಗತಿ, ಹೈಯರ್ ಸೆಕೆಂಡರಿ ತತ್ಸಮಾನ ತರಬೇತಿಗಳ ಈ ವರ್ಷದ ನೋಂದಣಿ ಆರಂಭಗೊಂಡಿದೆ.
       ಈ ಸಂಬಂಧ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಇ.ಪದ್ಮಾವತಿ, ಪುಷ್ಪಾ ಅಮೆಕ್ಕಳ, ಪಿ.ವಿ.ಪದ್ಮಜಾ, ಮುಂತಾಝ್ ಝಮೀರ, ಕಾರ್ಯದರ್ಶಿ ಪಿ. ನಂದಕುಮಾರ್, ಹಣಕಾಸು ಅಧಿಕಾರಿ ಷಂನಾದ್, ಸಾಕ್ಷರತಾ ಮಿಷನ್ ಜಿಲ್ಲ ಸಂಚಾಲಕ ಷಾಜು ಜಾನ್, ಸಹಾಯಕ ಂಚಾಲಕ ಪಿ.ವಿ.ಶಾಸ್ತಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ನೋಡೆಲ್ ಪ್ರೇರಕ್ ಆಯಿಷಾ ಮಹಮ್ಮದ್ ತತ್ಸಮಾನ ನೋಂದಣಿ ಪಾರಂ ಪಡೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries