HEALTH TIPS

ರಾಷ್ಟ್ರೀಯ ವಾಚನಾ ಮಾಸಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಸಮಾರೋಪ ಇಂದು



           
         ಕಾಸರಗೋಡು:  ರಾಷ್ಟ್ರೀಯ ವಾಚನಾ ಮಾಸಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಸಮಾರೋಪ ಇಂದು(ಜು.18) ನಡೆಯಲಿದೆ.
             ಪಿ.ಎನ್.ಪಣಿಕ್ಕರ್ ಫೌಂಡೇಶನ್, ಕ್ಯಾನ್ ಫೆಡ್, ವಾಚನಾ ಸಪ್ತಾಹ ಸಮಿತಿ, ಪೆರಿಯ ಕೇಂದ್ರ ವಿವಿ ಮಲೆಯಾಳಂ ವಿಭಾಗ ಜಂಟಿ ವತಿಯಿಂದ ಒಂದು ತಿಂಗಳ ಕಾಲ ವೈವಿಧ್ಯಮಯ ಕಾರ್ಯಗಳನ್ನು ಈ ಅಂಗವಾಗಿ ನಡೆಸಲಾಗಿತ್ತು.
        ಇಂದು(ಜು.18) ಬೆಳಗ್ಗೆ 11 ಗಂಟೆಗೆ ಪೆರಿಯ ಕೇಂದ್ರೀಯ ವಿವಿ ಕ್ಯಾಂಪಸ್ ನಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಉಪಕುಲಪತಿ ಡಾ.ಜಿ.ಗೋಪಕುಮಾರ್ ಉದ್ಘಾಟಿಸುವರು. ಪಿ.ಎನ್.ಪಣಿಕ್ಕರ್ ಫೌಂಡೇಶನ್ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಕೆ.ವಿ.ರಾಘವನ್ ಪಿ.ಎನ್.ಪಣಿಕ್ಕರ್ ಅವರ ಸಂಸ್ಮರಣೆ ನಡೆಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries