HEALTH TIPS

ಸೆ.14. ಚಿಗುರುಪಾದೆ ದೇವಸ್ಥಾನದಲ್ಲಿ ಸಿಂಹಮಾಸ ಕೊನೆಯ ಬಲಿವಾಡುಕೂಟ ಹಾಗೂ ಶ್ರೀ ಕೃಷ್ಣ ಪರಂಧಾಮ ತಾಳಮದ್ದಳೆ


     ಮಂಜೇಶ್ವರ : ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಿಂಹ ಮಾಸ ಕೊನೆಯ ಬಲಿವಾಡುಕೂಟ ಸೆ. 14 ರಂದು  ಶನಿವಾರ ಜರಗಲಿದ್ದು ಆ ದಿನದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ  ವೇದಮೂರ್ತಿ ಗಣೇಶ ನಾವಡ ಮತ್ತು ಬಳಗದವರ ಪ್ರಾಯೋಜಕತ್ವದಲ್ಲಿ ಯಕ್ಷಮಿತ್ರರು ಮೀಯಪದವು ತಂಡದಿಂದ ಶ್ರೀ ಕೃಷ್ಣ ಪರಂಧಾಮ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರು ರಾಮಪ್ರಸಾದ ಮಯ್ಯ ಕೂಡ್ಲು ಹಾಗೂ ಗೌರೀಶ ಕಾರಂತ ಶಿರಿಯ, ಚೆಂಡೆ ಮದ್ದಳೆಗಳಲ್ಲಿ  ಸುಬ್ರಹ್ಮಣ್ಯ ಚಿತ್ರಾಪುರ ಮತ್ತು ವಿಷ್ಣು ಕಿರಣ ಶರ್ಮ ಭಾಗವಹಿಸುವರು. ಪಾತ್ರವರ್ಗದಲ್ಲಿ ಗುರುರಾಜ ಹೊಳ್ಳ ಬಾಯಾರು, ರಾಜಾರಾಮ ರಾವ್ ಚಿಗುರುಪಾದೆ, ವೇದಮೂರ್ತಿ ಗಣೇಶ ನಾವಡ ಚಿಗುರುಪಾದೆ, ಯೋಗೀಶ ರಾವ್ ಚಿಗುರುಪಾದೆ,  ಗುರುಪ್ರಸಾದ ಹೊಳ್ಳ ತಿಂಬರ, ವಿಘ್ನೇಶ ಕಾರಂತ ಶಿರಿಯ ಭಾಗವಹಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries