HEALTH TIPS

ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಮಾಹಿತಿ ಶಿಬಿರ

      ಉಪ್ಪಳ: ಭಾರತೀಯ ಜನತಾ ಯುವಮೋರ್ಚ ಪೈವಳಿಕೆ ಪಂಚಾಯತಿ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಮಾಹಿತಿ ಶಿಬಿರ ಸಜಂಕಿಲ ಶಾಲೆಯಲ್ಲಿ ಭಾನುವಾರ ನಡೆಯಿತು.
     ಯುವಮೋರ್ಚ ಪೈವಳಿಕೆ ಪಂಚಾಯತಿ ಅಧ್ಯಕ್ಷ ಮನುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪ ಅಮೆಕ್ಕಳ ಹಾಗು ಯುವಮೋರ್ಚ ಜಿಲ್ಲಾ ಉಪಾಧ್ಯಕ್ಷ ಧನರಾಜ್ ಪ್ರತಾಪನಗರ ಶುಭಾಸಂಸನೆಗೈದರು. ಬಿಜೆಪಿ ಪೈವಳಿಕೆ ಪಂಚಾಯತಿ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಪೈವಳಿಕೆ ಪಂಚಾಯತಿ ಪ್ರಭಾರಿ ಹರಿಶ್ಚಂದ್ರ ಮಂಜೇಶ್ವರ, ರಾಜ್ಯ ಸಮಿತಿ ಸದಸ್ಯೆ ಸರೋಜ ಆರ್. ಬಲ್ಲಾಳ್, ಯುವಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಿತ್‍ರಾಜ್ ಪೆರ್ಲ, ಹರೀಶ್ ಸೋಂಕಾಲ್, ವಿಶ್ವೇಶ್ವರ ಭಟ್ ಆಟಿಕುಕ್ಕೆ ಉಪಸ್ಥಿತರಿದ್ದರು.
       ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತೆ ಮತ್ತು ಕ್ರೆಡಿಟ್ ಕೌನ್ಸಿಲ್ ಟ್ರಸ್ಟ್‍ನ ದೇವದಾಸ್ ಬಿ., ಹಾಗು ಸ್ನೇಹ ಬಾಳಿಕೆ  ಮಾಹಿತಿ ಮಾರ್ಗದರ್ಶನ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries