HEALTH TIPS

ಜಲೀಲ್ ರಾಜೀನಾಮೆ ಒತ್ತಾಯಿಸಿ ಪ್ರಬಲ ಪ್ರತಿಭಟನೆ: ಯುವ ಸಂಘಟನೆಗಳ ಸಚಿವಾಲಯ ಮೆರವಣಿಗೆ ಇಂದು

  

      ತಿರುವನಂತಪುರ: ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಬಲಗೊಳ್ಳುತ್ತಿದೆ. ಪ್ರತಿಪಕ್ಷ ವಿದ್ಯಾರ್ಥಿ ಯುವ ಸಂಘಟನೆಗಳು ಇಂದು ಸೆಕ್ರಟರಿಯೇಟ್ ಗೆ ಮೆರವಣಿಗೆ ನಡೆಸಲಿವೆ. ಏತನ್ಮಧ್ಯೆ, ವಿಮಾನ ನಿಲ್ದಾಣದ ಮೂಲಕ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಶೀಘ್ರದಲ್ಲೇ ಸಚಿವ ಕೆ.ಟಿ.ಜಲೀಲ್ ಅವರನ್ನು ಎರಡನೇ ಬಾರಿ ಪ್ರಶ್ನಿಸಲಿದೆ.

       ಕಸ್ಟಮ್ಸ್ ತನಿಖೆಯ ಬೆನ್ನಿಗೆ ಜಾರಿ ನಿರ್ದೇಶನಾಲಯದ ತನಿಖೆಯನ್ನೂ ಸಚಿವರು ಎದುರಿಸಲಿರವರು. ರಾಜತಾಂತ್ರಿಕ ಚೀಲದ ಮೂಲಕ ಧಾರ್ಮಿಕ ಗ್ರಂಥಗಳ ಸೋಗಿನಲ್ಲಿ ಸ್ವಪ್ನಾ ಸುರೇಶ್ ಮತ್ತು ಅವರ ತಂಡ ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದಾರೆಯೇ ಎಂಬ ತನಿಖೆಯ ಭಾಗ ಈ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.

          ಕೆ.ಟಿ.ಜಲೀಲ್ ಮಾಧ್ಯಮಗಳನ್ನು ಕೂಡಾ ಇಂದು ಭೇಟಿ ಮಾಡುವ ಸಾಧ್ಯತೆ ಇದೆ. ಪ್ರತಿ ಪಕ್ಷದ ಯುವ ಸಂಘಟನೆಗಳ ತೀವ್ರ ಪ್ರತಿಭಟನೆಯ ನಡುವೆ ಕೆ.ಟಿ.ಜಲೀಲ್ ವಾಲಂಚೇರಿಯಲ್ಲಿರುವ ತಮ್ಮ ಮನೆಯಿಂದ ತಿರುವನಂತಪುರನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಭಾನುವಾರ ಹಿಂತೆರಳಿದರು. ಪ್ರಯಾಣದುದ್ದಕ್ಕೂ ಸಚಿವರು ಭಾರಿ ಪ್ರತಿಭಟನೆ ಎದುರಿಸಿದರು.

        ಕೊಲ್ಲಂ ಪರಿಪಲ್ಲಿಯಲ್ಲಿ ಪ್ರತಿಭಟನಾಕಾರರು ಸಚಿವರ ವಾಹನ ದಾಟಿ ಸಚಿವರ ಬೆಂಗಾವಲು ತಡೆಯಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ಸಚಿವರ ಮೇಲೆ ಕಪ್ಪು ಧ್ವಜಗಳನ್ನು ಬೀಸಿದರು.  ಗಲಭೆಯ ಒಂದು ಹಂತದಲ್ಲಿ ಪೆÇಲೀಸರು ರ್ಯಾಲಿಗೆ ನುಗ್ಗಿ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಟ್ರಕ್ ಮೂಲಕ ಕರೆದೊಯ್ದು ಬಿಡುಗಡೆಗೊಳಿಸಿದರು. 

       ಲೈಫ್ ಮಿಷನ್ ಗೆ ಸಂಬಂಧಿಸಿದ ಆಯೋಗದ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯ ಸಿಇಒ ಯುವಿ ಜೋಸ್‍ರನ್ನು ಇಂದು ಪ್ರಶ್ನಿಸುವ ಸೂಚನೆಗಳಿವೆ. ರೆಡ್ ಕ್ರೆಸೆಂಟ್ ಕೇರಳಕ್ಕೆ ಹಣಕಾಸಿನ ನೆರವು ನೀಡಿದ ಸಂದರ್ಭಗಳು, ನಿರ್ಮಾಣಕ್ಕಾಗಿ ಯುನಿಟೆಕ್ ಅನ್ನು ಆಯ್ಕೆ ಮಾಡಿದ ಸಂದರ್ಭ ಮತ್ತು ಲಂಚದ ಒಪ್ಪಂದವನ್ನು ಪ್ರಶ್ನಿಸಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries