HEALTH TIPS

ಚಿನ್ನ ವಿಲೇವಾರಿಗೆ ಸ್ವಪ್ನಾ ಅನೇಕ ಬಾರಿ ತನ್ನನ್ನು ಸಂಪರ್ಕಿಸಿದ್ದು ಹೌದು-ಯಾವುದೇ ಸಹಾಯವನ್ನು ಮಾಡಿರಲಿಲ್ಲ-ಎಂ.ಶಿವಶಂಕರ್

 

        ಕೊಚ್ಚಿ: ಚಿನ್ನ ಹೊಂದಿರುವ ಚೀಲವನ್ನು ವಿಲೇವಾರಿಗೊಳಿಸಲು ಸ್ವಪ್ನಾ ಹಲವಾರು ಬಾರಿ ತನ್ನನ್ನು ಸಂಪರ್ಕಿಸಿದ್ದು ಹೌದು ಎಂದು ಮಾಜಿ ಕಾರ್ಯದರ್ಶಿ ಎಂ ಶಿವಶಂಕರ್ ಹೇಳಿದ್ದಾರೆ. ಆದರೆ, ಈ ವಿಷಯದಲ್ಲಿ ಸ್ವಪ್ನಾ ಅವರಿಗೆ ಯಾವುದೇ ಸಹಾಯವನ್ನು ತಾನು ನೀಡಿಲ್ಲ ಎಂದು ಎಂ.ಶಿವಶಂಕರ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನ್ಯಾಯಾಲಯದಲ್ಲಿ ಸಲ್ಲಿಸಿದ ಚಾರ್ಜ್‍ಶೀಟ್‍ನೊಂದಿಗೆ ಶಿವಶಂಕರ್ ಅವರ ಹೇಳಿಕೆ ದಾಖಲಿಸಲಾಗಿದೆ. 

       ಶಿವಶಂಕರ್ ಅವರು 2016 ರಿಂದ ಸರ್ಕಾರ ಮತ್ತು ಯುಎಇ ದೂತಾವಾಸದ ನಡುವಿನ ಸಂಪರ್ಕದ ಕೇಂದ್ರವಾಗಿದ್ದರು ಎಂದು ಇಡಿಗೆ ತಿಳಿಸಿದ್ದಾರೆ. ಆದರೆ, ಸ್ವಪ್ನಾ ಸುರೇಶ್ ತಮ್ಮ ಹೇಳಿಕೆಯಲ್ಲಿ ಹೇಳಿರುವಂತೆ, 2017 ರ ಕ್ಲಿಫ್ ಹೌಸ್‍ನಲ್ಲಿ ಸ್ವಪ್ನಾ ಅವರೊಂದಿಗೆ ಸಿಎಂ ಅವರನ್ನು ನೋಡಿದ ನೆನಪಿಲ್ಲ. ಮುಖ್ಯಮಂತ್ರಿಯ ಉಪಸ್ಥಿತಿಯಲ್ಲಿ ಮತ್ತು ಹೊರಗೆ ಸ್ವಪ್ನಾ ಅವರನ್ನು ಹಲವಾರು ಬಾರಿ ನೋಡಿದ್ದೇನೆ ಎಂಬ ತನಿಖಾಧಿಕಾರಿಗಳ ಹೇಳಿಕೆಗೆ ಶಿವಶಂಕರ್ ಪ್ರತಿಕ್ರಿಯಿಸಲಿಲ್ಲ.

        ಸೌಂದರ್ಯವರ್ಧಕಗಳನ್ನು ತಂದು ಮಾರಾಟ ಮಾಡುತ್ತಿದ್ದೆ ಎಂದು ಸಪ್ನಾ ಹೇಳಿದ್ದರು. ಯುಎಇ ಕಾನ್ಸುಲೇಟ್‍ನ ಅಧಿಕಾರಿಗಳು ರಾಜತಾಂತ್ರಿಕ ಸರಕುಗಳ ಮೂಲಕ ಸರಕುಗಳನ್ನು ಕಳ್ಳಸಾಗಣೆ ಮಾಡಿ ಭೀಮಾಪಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಸ್ವಪ್ನಾ ಹೇಳಿದ್ದಾರೆ.

    ಶಿವಶಂಕರ್ ಸ್ವಪ್ನಾಳೊಂದಿಗೆ ಮೂರು ಬಾರಿ ವಿದೇಶ ಪ್ರವಾಸ ಮಾಡಿದ್ದು ನಿಜ. ಕೇರಳವನ್ನು ವಿವಿಧ ಮಾರ್ಗೋಪಾಯಗಳ ಮೂಲಕ ಪುನಶ್ಚೇತನಗೊಳಿಸುವ ಭಾಗವಾಗಿ ಸರ್ಕಾರದ ಯೋಜನೆಯನುಸಾರ ವಿದೇಶ ಪ್ರವಾಸ ಮಾಡಿದ್ದು ಈ ವೇಳೆ ಸ್ವಪ್ನಾ ಜೊತೆಗಿದ್ದರು ಎಮದು ಸಾಬೀತಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries