HEALTH TIPS

ಕೋವಿಡ್ 19 ತಪಾಸಣೆಯ ನಂತರ ಫಲಿತಾಂಶ ಬರುವ ಮುನ್ನ ಅಲೆದಾಡುವುದು ಶಿಕ್ಷಾರ್ಹ: ಜಿಲ್ಲಾ ವೈದ್ಯಾಧಿಕಾರಿ

                        

           ಕಾಸರಗೋಡು: ಕೋವಿಡ್ 19 ತಪಾಸಣೆಯ ನಂತರ ಫಲಿತಾಂಶ ಬರುವ ಮುನ್ನ ಅಲೆದಾಡುವುದು ಶಿಕ್ಷಾರ್ಹ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

               ಫಲಿತಾಂಶ ಅರಿಯುವ ಮುನ್ನ ಅಲೆದಾಡಿದರೆ ಕೊರೋನಾ ರೋಗ ಹರಡುವಿಕೆಗೆ ಕಾರಣವಾಗುವ ಭೀತಿಯಿದೆ ಎಂದವರು ತಿಳಿಸಿದರು. ಈ ರೀತಿ ವರ್ತಿಸುವವರ ವಿರುದ್ಧ ಕೇರಳ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸಂಪರ್ಕ ಕಾರಣಗಳಿಂದ ಯಾ ವೈದ್ಯರ ಸಲಹೆಯ ಕಾರಣಗಳಿಂದ ಫಲಿತಾಂಶ ಲಭಿಸುವವರೆಗೆ ಕ್ವಾರೆಂಟೈನ್ ಪಾಲಿಸಬೇಕಿದೆ. ಕೋವಿಡ್ 19 ಖಚಿತಗೊಂಡಲ್ಲಿ ಕಡ್ಡಾಯ 10 ದಿನಗಳ ಕ್ವಾರಂಟೈನ್ ಪಾಲಿಸಬೇಕು. ತದನಂತರ (10 ದಿನಗಳ ನಂತರ) ಆಂಟಿಜೆನ್ ತಪಾಸಣೆಗೆ ಒಳಗಾಗಿ ಫಲಿತಾಂಶ ನೆಗೆಟಿವ್ ಆಗಿದ್ದರೂ, 7 ದಿನಗಳ ಕ್ವಾರೆಂಟೈನ್ ಮತ್ತೆ ಪಾಲಿಸಬೇಕು. ತದನಂತರವಷ್ಟೇ ಹೊರಗಿಳಿಯಬಹುದಾಗಿದೆ ಎಂದವರು ತಿಳಿಸಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries