HEALTH TIPS

ಕೆ.ಎಸ್.ಆರ್.ಟಿ.ಸಿ. ಆರ್ಥಿಕ ಅವ್ಯಹಾರ: ವಿಜಿಲೆನ್ಸ್ ವಿಚಾರಣೆ ನಿರ್ಧಾರ; ಶೀಘ್ರದಲ್ಲೇ ಆದೇಶ

                                                  

            ತಿರುವನಂತಪುರ:ಕೆ.ಎಸ್.ಆರ್.ಟಿ.ಸಿ.ಯ ಆರ್ಥಿಕ ಅವ್ಯವಹಾರಗಳ  ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸಲಿದೆ. ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆ.ಎಸ್.ಆರ್.ಟಿ.ಸಿ.ಯಲ್ಲಿ 100 ಕೋಟಿ ರೂ.ಗಳ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.

                ಅಕ್ರಮಗಳು ನಡೆದಿವೆ ಎಂದು ಕೆಎಸ್‍ಆರ್‍ಟಿಸಿ ಎಂಡಿ ಬಿಜು ಪ್ರಭಾಕರ್ ಆರೋಪಿಸಿದ್ದಾರೆ. ಜನವರಿಯಲ್ಲಿ ತಿರುವನಂತಪುರಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಲಾಗಿತ್ತು. ಆರೋಪಗಳು ಬೆಳಕಿಗೆ ಬಂದ ಮೂರು ತಿಂಗಳ ಬಳಿಕ ಘಟನೆಯ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸಲು ಸೂಚಿಸಲಾಗಿದೆ. 

                 2010-13ರ ಅವಧಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜು ಪ್ರಭಾಕರ್ ತಿಳಿಸಿದ್ದರು. 100 ಕೋಟಿ ರೂ.ಗಳ ಕಣ್ಮರೆಗೆ ಹೊರತಾಗಿ, ಅದಕ್ಕೆ ಸಂಬಂಧಿಸಿದ ಯಾವುದೇ ಫೈಲ್‍ಗಳು ಅಥವಾ ದಾಖಲೆಗಳಿಲ್ಲ ಎಂದು ಅವರು ಹೇಳಿರುವರು. ಆರೋಪದ ಬಳಿಕ ಆಗಿನ ಖಾತೆ ಅಧಿಕಾರಿ ಮತ್ತು ಹಾಲಿ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಂ.ಶ್ರೀಕುಮಾರ್ ಅವರನ್ನು ಎರ್ನಾಕುಳಂಗೆ ವರ್ಗಾಯಿಸಲಾಯಿತು. ಆದರೆ, ಅಕ್ರಮಗಳೆಂದು ಹೇಳಲಾದ ಸಮಯದಲ್ಲಿ ಅವರು ಖಾತೆಯ ಉಸ್ತುವಾರಿ ವಹಿಸಿರಲಿಲ್ಲ ಎಂದು ಶ್ರೀಕುಮಾರ್ ಹೇಳಿಕೆ ನೀಡಿದ್ದಾರೆ. 


                 ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸದಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯ ವಿರುದ್ಧವೂ ಕ್ರಮಗಳು ಇರಲಿವೆ. ವಿಜಿಲೆನ್ಸ್ ವಿಚಾರಣೆಗೆ ಸಂಬಂಧಿಸಿದ ಆದೇಶವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಬಿಜು ಪ್ರಭಾಕರ್ ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries