HEALTH TIPS

ಶಬರಿಮಲೆಯಲ್ಲಿ ಹಲಾಲ್ ಬೆಲ್ಲ ಬಳಕೆ: ಶಬರಿಮಲೆ ಕ್ರಿಯಾ ಸಮಿತಿ ದೂರಿಗೆ ದೇವಸ್ವಂ ಮಂಡಳಿಯಿಂದ ವರದಿ ಕೇಳಿದ ಹೈಕೋರ್ಟ್

                                                       

                    ಕೊಚ್ಚಿ: ಶಬರಿಮಲೆಯಲ್ಲಿ ಹಲಾಲ್ ಬೆಲ್ಲದ ಬಳಕೆ ಆರೋಪದ ಕುರಿತು ಹೈಕೋರ್ಟ್ ದೇವಸ್ವಂ ಮಂಡಳಿಯಿಂದ ವರದಿ ಕೇಳಿದೆ. ಶಬರಿಮಲೆ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕ ಎಸ್. ಜೆ. ಆರ್ ಕುಮಾರ್ ಸಲ್ಲಿಸಿದ್ದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಇಂದು ತನ್ನ ನಿಲುವು ತಿಳಿಸುವುದಾಗಿ ಕೋರ್ಟ್ ಹೇಳಿದೆ. ವಿಶೇಷ ಆಯುಕ್ತರ ವರದಿಯನ್ನೂ ಸಲ್ಲಿಸಲು ಸೂಚಿಸಲಾಗಿದೆ. 

            ಶಬರಿಮಲೆಯಲ್ಲಿ ಅಪ್ಪಂ ಮತ್ತು ಅರವಣ ಪ್ರಸಾದವನ್ನು ತಯಾರಿಸಲು ಹಲಾಲ್ ಬೆಲ್ಲವನ್ನು ಬಳಸಲಾಗುತ್ತಿದೆ ಎಂದು ದೂರಲಾಗಿದೆ. ಗೋದಾಮಿನಿಂದ ಬೆಲ್ಲವನ್ನು ಹೊರತೆಗೆದಾಗ, ಅದರ ಮೇಲೆ ಇಂಗ್ಲಿಷ್‍ನಲ್ಲಿ 'ಹಲಾಲ್' ಎಂದು ಬರೆದಿರುವುದು ಕಂಡುಬಂದಿದೆ. ಬೆಲ್ಲ ಪೂರೈಕೆಯ ಗುತ್ತಿಗೆಯನ್ನು ಕಳೆದ ವರ್ಷ ದೇವಸ್ವಂ ಮಂಡಳಿ ನೀಡಿತ್ತು. ಮತ್ತು ಅದರ ಮುಕ್ತಾಯ ದಿನಾಂಕ ಈಗಾಗಲೇ ಮುಗಿದಿದೆ ಕೂಡ.

              ಆದರೆ, ಅಪ್ಪಂ ಮತ್ತು ಅರವಣ ಪ್ರಸಾದಕ್ಕೆ ಬಳಸುವ ಬೆಲ್ಲದ ಕೆಲವು ಪ್ಯಾಕೆಟ್‍ಗಳಲ್ಲಿ ಮಾತ್ರ ಹಲಾಲ್ ಮುದ್ರೆ ಇದೆ ಎಂದು ದೇವಸ್ವಂ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿದೆ. ಅರಬ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಕಾರಣ ಬೆಲ್ಲದ ಚೀಲಗಳ ಮೇಲೆ ಹಲಾಲ್ ಮುದ್ರೆ ಹಾಕಲಾಗಿದೆ ಎಂದು ದೇವಸ್ವಂ ಮಂಡಳಿ ನ್ಯಾಯಾಲಯಕ್ಕೆ ಮೌಖಿಕವಾಗಿ ಹೇಳಿದೆ.

                 ಶಬರಿಮಲೆಯಲ್ಲಿ ಅನ್ಯ ಧರ್ಮದವರು ಮುದ್ರೆಯೊತ್ತಿರುವ ಆಹಾರ ಪದಾರ್ಥಗಳನ್ನು ಬಳಸಬಾರದು ಎಂಬ ನಿಯಮವನ್ನು ದೇವಸ್ವಂ ಮಂಡಳಿ ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಬಳಸಲು ಯೋಗ್ಯವಾಗದ ಬೆಲ್ಲವನ್ನು ಪ್ರಸಾದ ತಯಾರಿಕೆಗೆ ಬಳಸುವುದು ಗಂಭೀರ ಅಪರಾಧ.

                  ಹರಾಜಿನಲ್ಲಿ ಬಂದಿರುವ ಉಪಯೋಗಿಸಬಾರದ  ಬೆಲ್ಲವನ್ನು ವಶಪಡಿಸಿಕೊಂಡು ನಾಶಪಡಿಸಬೇಕು. ಸೇವಿಸಲು ಯೋಗ್ಯವಲ್ಲದ್ದನ್ನು ಗುರುತಿಸಿ ನಾಶಪಡಿಸಬೇಕು ಎಂಬ ಕಾನೂನು ಇದ್ದರೂ ಆಹಾರ ಸುರಕ್ಷತಾ ಇಲಾಖೆ ಮಾಡಿಲ್ಲ. ಬೆಲ್ಲದ ಟೆಂಡರ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries