HEALTH TIPS

ಪ್ರತಿಭಟನಾ ನಿರತ ಕಾಂಗ್ರೆಸ್ಸಿಗರ ವಿರುದ್ಧ ಭಯೋತ್ಪಾದಕ ಹೇಳಿಕೆ: ಪೋಲೀಸ್ ಅಧಿಕಾರಿ ಅಮಾನತು

                                            

                   ಕೊಚ್ಚಿ: ಮೋಫಿಯಾ ದೂರಿನ ಮೇರೆಗೆ ಕೈಗೊಂಡ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಭಯೋತ್ಪಾದನೆ ಎಂಬ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೆÇಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಕಾಂಗ್ರೆಸ್ಸಿಗರು ಭಯೋತ್ಪಾದಕ ನಂಟು ಹೊಂದಿದ್ದಾರೆ ಎಂದು ಪೋಲೀಸ್ ಅಧಿಕಾರಿಗಳು ಆರೋಪಿಸಿದ್ದರು. 

                 ಅಲ್ ಅಮೀನ್, ಅನಸ್ ಮತ್ತು ನಜೀಬ್ ಅವರನ್ನು ಪೋಲೀಸರು ಬಂಧಿಸಿದ್ದರು.  ಅವರ ಕಸ್ಟಡಿಗೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಭಯೋತ್ಪಾದಕ ನಂಟು ಹೊಂದಿರುವ ಶಂಕೆ ಇದೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದರು. 

                ಪ್ರತಿಭಟನೆಯ ಅಂಗವಾಗಿ ಡಿಐಜಿಯವರ ಕಾರನ್ನು ತಡೆದು ವಾಟರ್ ಕ್ಯಾನನ್ ಮೇಲೆ ಘಾಸಿಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಪೋಲೀಸರು ಮೂವರನ್ನು ಮಾತ್ರ ಕಸ್ಟಡಿಗೆ ಕೋರಿದ್ದಾರೆ. ಪ್ರಕರಣದಲ್ಲಿ ಕೆಎಸ್‍ಯು ಆಲುವಾ ಕ್ಷೇತ್ರದ ಅಧ್ಯಕ್ಷ ಅಲ್ ಅಮೀನ್, ಕಾಂಗ್ರೆಸ್ ಕೀರ್ಮಟ್ ಕ್ಷೇತ್ರದ ಅಧ್ಯಕ್ಷ ನಜೀಬ್ ಮತ್ತು ಬೂತ್ ಉಪಾಧ್ಯಕ್ಷ ಅನಸ್ ಅವರನ್ನು ಬಂಧಿಸಲಾಗಿದೆ.

                   ಮೂವರನ್ನು ಬಿಡುಗಡೆ ಮಾಡುವುದು ಅಪಾಯಕಾರಿ ಎಂದೂ ಪೋಲೀಸ್ ವರದಿಯಲ್ಲಿ ಹೇಳಲಾಗಿದೆ. ಅವರನ್ನು ಬಿಡುಗಡೆ ಮಾಡಿದರೆ ಗಲಭೆಗೆ ಕಾರಣವಾಗಬಹುದು ಎಂದು ಪೋಲೀಸ್ ವರದಿಯಲ್ಲಿ ಆರೋಪಿಸಲಾಗಿದೆ. ಆರೋಪಿಗಳು ನೀರಿನ ಫಿರಂಗಿ ಮೇಲೆ ನಿಂತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಿದೆ.

                    ಮೊಫಿಯಾ ಪ್ರವೀಣ್ ದೂರು ನೀಡಿ ಒಂದು ತಿಂಗಳು ಕಳೆದರೂ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಮೋಫಿಯಾಳನ್ನು ಆತ್ಮಹತ್ಯೆಗೆ ದೂಡಿರುವ ಸಿಐಎಯನ್ನು ಅಮಾನತು ಮಾಡಬೇಕೆಂಬುದು ಆಗ್ರಹಿಸಲಾಗಿತ್ತು. ಪ್ರತಿಭಟನೆ ಮೂರು ದಿನಗಳ ಕಾಲ ನಡೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries