HEALTH TIPS

ಲೋಕಾಯುಕ್ತ ತಿದ್ದುಪಡಿ: ಪ್ರತಿಪಕ್ಷದ ವಿರೋಧ; ಕಾನೂನು ಸಲಹೆಗೆ ಮುಂದಾದ ರಾಜ್ಯಪಾಲ

                                                             

                  ತಿರುವನಂತಪುರ: ಲೋಕಾಯುಕ್ತದ ಬಗ್ಗೆ  ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಹೊಸ ಸುಗ್ರೀವಾಜ್ಞೆ ಕುರಿತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕಾನೂನು ಸಲಹೆ ಕೇಳಿದ್ದಾರೆ. ಸರ್ಕಾರದ ಹೊಸ ಕ್ರಮದ ವಿರುದ್ಧ ಪ್ರತಿಪಕ್ಷಗಳು ಗರಂ ಆದ ಹಿನ್ನೆಲೆಯಲ್ಲಿ ರಾಜ್ಯಪಾಲರು ಕಾನೂನು ಸಲಹೆ ಪಡೆಯುತ್ತಿದ್ದಾರೆ. ರಾಜ್ಯಪಾಲರು ತಮ್ಮ ಕಾನೂನು ಸಲಹೆಗಾರರಲ್ಲದೆ ದೆಹಲಿಯ ಕಾನೂನು ತಜ್ಞರೊಂದಿಗೂ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.

               ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ಅವರ ವಿರುದ್ಧದ ದೂರುಗಳನ್ನು ಲೋಕಾಯುಕ್ತರು ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲೋಕಾಯುಕ್ತದ ಹಲ್ಲು ಕೀಳುವ ಯತ್ನಕ್ಕೆ ಮುಂದಾಗಿದೆ ಎನ್ನಲಾಗಿದೆ. ಹೊಸ ವಿವಾದಾತ್ಮಕ ಸುಗ್ರೀವಾಜ್ಞೆಯು ಲೋಕಾಯುಕ್ತರು ಈ ವಿಷಯವನ್ನು ಪರಿಶೀಲಿಸಲು ಮತ್ತು ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಭ್ರಷ್ಟರು ಮತ್ತು ಅಧಿಕಾರ ನಡೆಸಲು ಅನರ್ಹರು ಎಂದು ಲೋಕಾಯುಕ್ತರು ಕಂಡುಕೊಂಡರೂ ತೀರ್ಪನ್ನು ರದ್ದುಪಡಿಸಲು ಅನುವು ಮಾಡಿಕೊಡುತ್ತದೆ. ಸುಗ್ರೀವಾಜ್ಞೆಗೆ ಅಂಕಿತ ಹಾಕದಂತೆ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

                   ಸರ್ಕಾರ ಪದಚ್ಯುತಿ ವಿವಾದದ ಬಳಿಕ ವಿ.ಡಿ. ಸತೀಶನ್ ನೇತೃತ್ವದ ಯುಡಿಎಫ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದೆ. ಸುಗ್ರೀವಾಜ್ಞೆಯನ್ನು ಸಮರ್ಥಿಸುವ ನಿಲುವನ್ನು ಸಿಪಿಎಂ ತೆಗೆದುಕೊಂಡಿದ್ದರೂ, ಸರ್ಕಾರದ ಕ್ರಮದ ವಿರುದ್ಧ ಹಲವು ಕಾನೂನು ತಜ್ಞರು ಹರಿಹಾಯ್ದಿದ್ದಾರೆ.

               ಅಡ್ವೊಕೇಟ್ ಜನರಲ್ ನೀಡಿರುವ ಕಾನೂನು ಸಲಹೆಯಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸರ್ಕಾರ ಮತ್ತು ಸಿಪಿಎಂ ಹೇಳಿಕೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಟಿ.ಜಲೀಲ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಎಜಿ ಅವರಿಗೆ ಕಾನೂನು ಸಲಹೆ ನೀಡಿರುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಲೋಕಾಯುಕ್ತ ಸಂಸ್ಥೆಗೆ ಕೇವಲ ಸಲಹಾ ಸಾಮಥ್ರ್ಯವಿದೆ ಎಂಬ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನಿಗೆ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾತ್ರ ಮಾಡುತ್ತಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

                  ಆದರೆ, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚೆ ನಡೆದಿಲ್ಲ. ಲೋಕಾಯುಕ್ತರು ಮೊನ್ನೆ ನಡೆದ ಆನ್‍ಲೈನ್ ಕ್ಯಾಬಿನೆಟ್ ಸಭೆಯಲ್ಲಿ ಕಾನೂನಿಗೆ ಸ್ವಲ್ಪ ತಿದ್ದುಪಡಿ ಮಾಡುವುದಾಗಿ ಘೋಷಿಸಿದ್ದರು. ಆದರೆ ಸುಗ್ರೀವಾಜ್ಞೆ ಕರಡು ರಚನೆಯಾದಾಗಲೇ ಹಲವು ಸಚಿವರಿಗೆ ಇದರ ವಿವರ ತಿಳಿಯಿತು ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries