HEALTH TIPS

ಸಮತ್ವ ಶಿಕ್ಷಕರಿಗೆ ತರಬೇತಿ

               ಕಾಸರಗೋಡು: ಕೋವಿಡ್ ಅವಧಿಯ ನಂತರ ಜಿಲ್ಲೆಯಲ್ಲಿ ಮುಂದುವರಿಕ ಶಿಕ್ಷಣ ಚಟುವಟಿಕೆಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಹೆಚ್ಚಿನ ಅರಿವು ಮೂಡಿಸಲು ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ (ಡಯಟ್) ಜಿಲ್ಲೆಯ ಹತ್ತನೇ ತರಗತಿ, ಹೈಯರ್ ಸೆಕೆಂಡರಿ, 4ನೇ ತರಗತಿ ಮತ್ತು 7ನೇ ತರಗತಿಯ ಸಮತ್ವದ 100 ಶಿಕ್ಷಕರಿಗೆ ತರಬೇತಿ ನೀಡಿದೆ. 

                ಚೆರ್ಕಳದ ಮಾರ್ಥೋಮಾ ಶಾಲಾ ಸಭಾಂಗಣದಲ್ಲಿ ನಡೆದ ತರಬೇತಿಯನ್ನು ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ  ನ್ಯಾಯವಾದಿ ಎಸ್.ಎನ್.ಸರಿತಾ ಉದ್ಘಾಟಿಸಿದರು. ಡಯಟ್ ಹಿರಿಯ ಉಪನ್ಯಾಸಕ ಇ.ವಿ.ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಕ್ಷರತಾ ಸಮಿತಿ ಸದಸ್ಯ ಕೆ.ವಿ.ರಾಘವನ್, ಮಾಸ್ಟರ್ ಮಾರ್ಥೋಮಾ ಶಾಲೆಯ ಮುಖ್ಯೋಪಾಧ್ಯಾಯಿನಿ ಜೋಸ್ಮಿ ಜೋಶುವಾ ಮಾತನಾಡಿದರು. ಇ.ವಿ.ನಾರಾಯಣನ್ ಮಾಸ್ಟರ್ ಕೆ.ವಿ.ರಾಘವನ್ ಮಾಸ್ಟರ್ ಎಸ್.ಎಂ.ರಾವ್, ಟಿ.ವಿ.ರಾಘವನ್ ಮಾಸ್ಟರ್ ಸಿ.ಎಲ್.ಕೃಷ್ಣನ್ ನಾಯರ್, ಟಿ.ಎ.ಸಮೀರ್, ಅನೂಪ್ ಪಿ.ವಿ ಮತ್ತು ಪಿ.ಎನ್.ಬಾಬು ವಿವಿಧ ವಿಷಯಗಳಲ್ಲಿ ತರಗತಿ ನಡೆಸಿದರು.  ಸಾಕ್ಷರತಾ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಪಿ.ಎನ್.ಬಾಬು ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries