ತ್ರಿಶೂರ್: ಸ್ಕೂಟರ್ನಿಂದ ಹಿಡಿದು ಬಸ್ಗಳವರೆಗಿನ ವಾಹನಗಳು ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. ಆದರೆ ನಿನ್ನೆ ಗುರುವಾಯೂರು ದೇವಸ್ಥಾನದಲ್ಲಿ ನಡೆದ ವಾಹನ ಪೂಜೆ ತುಸು ಭಿನ್ನವಾಗಿದ್ದು ಇತಿಹಾಸದಲ್ಲಿಯೇ ಮೊದಲು. ಏಕೆಂದರೆ ದೇವಸ್ಥಾನಕ್ಕೆ ಪೂಜೆಗೆಂದು ಐಷಾರಾಮಿ ಹೆಲಿಕಾಪ್ಟರ್ ತರಲಾಗಿತ್ತು. ಆರ್ಪಿ ಗ್ರೂಪ್ನ ಅಧ್ಯಕ್ಷ ಡಾ.ಬಿ.ರವಿ ಪಿಳ್ಳೈ ಖರೀದಿಸಿದ ಐಷಾರಾಮಿ ಹೆಲಿಕಾಪ್ಟರ್ ಅನ್ನು ಪೂಜೆಗಾಗಿ ಗುರುವಾಯೂರ್ ದೇವಸ್ಥಾನಕ್ಕೆ ತರಲಾಯಿತು.
ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಪೂಜೆ ನಡೆಯಿತು. ದೇವಸ್ಥಾನದ ಮುಂಭಾಗದಲ್ಲಿ ನಿಲುಗಡೆ ಮಾಡಿದ್ದ ಹೆಲಿಕಾಪ್ಟರ್ ಎದುರು ಮೇಲ್ಶಾಂತಿ ಸುಮೇಶ್ ನಂಬೂದಿರಿ ಪುಷ್ಪಾರ್ಚನೆಗ್ಯೆದು ಪೂಜೆ ಸಲ್ಲಿಸಿದರು. ನಂತರ ಆರತಿ, ಹಾರ ಮತ್ತು ಶ್ರೀಗಂಧ ಬಳಸಲಾಗಿತಗತು. ರವಿ ಪಿಳ್ಳೈ, ಅವರ ಪುತ್ರ ಗಣೇಶ್, ಪೈಲಟ್ಗಳಾದ ಕ್ಯಾಪ್ಟನ್ ಸುನಿಲ್ ಕನ್ನೋತ್ ಮತ್ತು ಕ್ಯಾಪ್ಟನ್ ಜಿಜಿ ಕುಮಾರ್ ಕೂಡ ಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಮಲ್ಲಿಸ್ಸೇರಿ ಪರಮೇಶ್ವರನ್ ನಂಬೂದಿರಿಪಾಡ್ ಮತ್ತು ಜ್ಯೋತಿಷಿ ಪೆರಿಂಗೋಡ್ ಶಂಕರನಾರಾಯಣನ್ ಉಪಸ್ಥಿತರಿದ್ದರು.
ವಿಶ್ವಾದ್ಯಂತ ಕೇವಲ 1,500 ಘಟಕಗಳನ್ನು ಹೊಂದಿರುವ ಹೆಲಿಕಾಪ್ಟರ್ ನ್ನು ರವಿ ಪಿಳ್ಳೈ ಅವರು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಿದ್ದಾರೆ. ಅವರು H-145D3 ಏರ್ಬಸ್ ಅನ್ನು ಹೊಂದಿದ್ದಾರೆ. ಇದು ಪೈಲಟ್ ಅಲ್ಲದೆ ಏಳು ಜನರನ್ನು ಹೊತ್ತೊಯ್ಯಬಹುದು. H-145 ಸಮುದ್ರ ಮಟ್ಟದಿಂದ 20,000 ಅಡಿಗಳಷ್ಟು ಎತ್ತರದಲ್ಲಿಯೂ ಸುಲಭವಾಗಿ ಇಳಿಯಬಹುದು ಮತ್ತು ಏರಬಹುದು. ಹೆಲಿಕಾಪ್ಟರ್ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ಶಕ್ತಿಯನ್ನು ಹೀರಿಕೊಳ್ಳುವ ಆಸನಗಳು ಮತ್ತೊಂದು ವೈಶಿಷ್ಟ್ಯವಾಗಿದೆ.

