HEALTH TIPS

ಮಲಬಾರಿನ ಜನರಿಗೆ ಕ್ಯಾನ್ಸರ್ ಚಿಕಿತ್ಸೆ ಸುಲಭ: ಶ್ರೀವಾಸ್ತವ - ಕಾರ್ಸಿನೋಸ್ ಕ್ಯಾನ್ಸರ್ ಸೆಂಟರ್ ಉದ್ಘಾಟಿಸಿ ವಿ. ಮುರಳೀಧರನ್

                 ಮಲಪ್ಪುರಂ: ಕೇರಳದಲ್ಲಿ ಅರ್ಬುದ ಚಿಕಿತ್ಸೆಗೆ ಹೊಸ ಶಕೆ ಆರಂಭಿಸಿದ ಶ್ರೀವಾಸ್ತವ - ಕಾರ್ಕಿನೋಸ್ ಕ್ಯಾನ್ಸರ್ ಸೆಂಟರ್ ಭರವಸೆ ಮೂಡಿಸಿದೆ ಎಂದು ಕೇಂದ್ರ ಸಚಿವ ವಿ.ಎಸ್. ಮುರಳೀಧರನ್ ಹೇಳಿರುವರು. ಆರೋಗ್ಯ ಕ್ಷೇತ್ರದಲ್ಲಿ ಪರಿವರ್ತನೆ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಇಂತಹ ಆಲೋಚನೆಯಿಂದ ಆಯುಷ್ಮಾನ್ ಭಾರತ್ ಯೋಜನೆ ರೂಪಿಸಲಾಗಿದೆ ಎಂದರು. ಮಲಪ್ಪುರಂನ ಶ್ರೀವಾಸ್ತವ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನ ಕ್ಯಾನ್ಸರ್ ಕೇಂದ್ರವನ್ನು ಕೇಂದ್ರ ಸಚಿವ ವಿ.ಎಸ್. ಮುರಳೀಧರನ್ ನಿರ್ವಹಿಸಿ ಮಾತನಾಡಿದರು. 

                  ಶ್ರೀವಾಸ್ತವ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸಸ್ ಎಡಪ್ಪಲ್ ನಡುವಟ್ಟಂನಲ್ಲಿದೆ.  ಇದು ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಹೊಸ ಕ್ಯಾನ್ಸರ್ ಕೇಂದ್ರವು ರಾಷ್ಟ್ರೀಯವಾಗಿ ಹೆಸರಾಂತ ಕ್ಯಾನ್ಸರ್ ಚಿಕಿತ್ಸಾ ಪೂರೈಕೆದಾರರಾದ ಕಾರ್ಸಿನೋಸ್‍ನ ಸಹಯೋಗವಾಗಿದೆ. ಕಾಕ್ರ್ವಿನೋಸ್ ಯುನೈಟೆಡ್ ಸ್ಟೇಟ್ಸ್‍ನ ಮೇಯೊ ಕ್ಲಿನಿಕ್‍ನೊಂದಿಗೆ ಸಹಯೋಗಿಯಾಗಿದ್ದು, ವಿಶ್ವ-ಪ್ರಸಿದ್ಧ ಕ್ಯಾನ್ಸರ್ ಚಿಕಿತ್ಸಾ ಕಂಪನಿಯಾಗಿದೆ. ಕೇಂದ್ರ ಸಚಿವ ವಿ ಮುರಳೀಧರನ್ ಮಾತನಾಡಿ, ವಿಶ್ವದ ದೃಷ್ಟಿಯಲ್ಲಿ ಭಾರತವನ್ನು ಆರೋಗ್ಯ ಕ್ಷೇತ್ರದಲ್ಲಿ ಪರಿವರ್ತಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು.

                ಆಸ್ಪತ್ರೆಯು 26 ಎಕರೆ ಪ್ರದೇಶದಲ್ಲಿ 550 ಹಾಸಿಗೆಗಳ ಸಾಮಥ್ರ್ಯ ಹೊಂದಿದೆ. ಅತ್ಯಾಧುನಿಕ ಉಪಕರಣಗಳೊಂದಿಗೆ ಹೊಸ ಕ್ಯಾನ್ಸರ್ ಕೇಂದ್ರವು ಮಲಬಾರ್ ನ  ರೋಗಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಚಿಕಿತ್ಸೆಯು ಸಾಮಾನ್ಯ ಜನರನ್ನು ತಲುಪುತ್ತದೆ ಎಂದು ವಿ.ಮುರಳೀಧರನ್ ಹೇಳಿದರು. ಶ್ರೀವಾಸ್ತವ ವೈದ್ಯಕೀಯ ಕೇಂದ್ರ ಕೇರಳದ ಹೆಸರಾಂತ ಕ್ಯಾನ್ಸರ್ ಚಿಕಿತ್ಸಕರನ್ನು ಒಳಗೊಂಡ ಕಾರ್ಸಿನೋಸ್ ಲೆವೆಲ್ ಟು ಲೆವೆಲ್ ಕ್ಯಾನ್ಸರ್ ಸೆಂಟರ್ ಅನ್ನು ಸ್ಥಾಪಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries