HEALTH TIPS

ರಾಷ್ಟ್ರಪತಿಗಳ ಪೋಲೀಸ್ ಪದಕಗಳ ಪ್ರಕಟ: ಎಡಿಜಿಪಿ ಮನೋಜ್ ಅಬ್ರಹಾಂ ಸೇರಿದಂತೆ ಕೇರಳದಿಂದ 12 ಮಂದಿಗೆ



             ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪೋಲೀಸ್ ಪದಕಗಳನ್ನು ಪ್ರಕಟಿಸಲಾಗಿದೆ.ಕೇರಳದ ಎಡಿಜಿಪಿ ಮನೋಜ್ ಅಬ್ರಹಾಂ ಸೇರಿದಂತೆ 12 ಅಧಿಕಾರಿಗಳಿಗೆ ಪದಕ ಘೋಷಿಸಲಾಗಿದೆ.
           ಇಬ್ಬರಿಗೆ ವಿಶಿಷ್ಟ ಸೇವಾ ಪದಕ ನೀಡಲಾಗುತ್ತದೆ.  ಈ ವಿಭಾಗದಲ್ಲಿ ಎಡಿಜಿಪಿ ಮನೋಜ್ ಅಬ್ರಹಾಂ ಮತ್ತು ಎಸಿಪಿ ಬಿಜು ಜಾರ್ಜ್ ಪದಕ ಗೆದ್ದಿದ್ದಾರೆ.
           ಕೇರಳದ ಹತ್ತು ಅಧಿಕಾರಿಗಳು ಪ್ರತಿಭಾನ್ವಿತ ಸೇವೆಗಾಗಿ ಪದಕವನ್ನು ಸ್ವೀಕರಿಸುತ್ತಾರೆ. ಎಸ್ಪಿ ವಿ.ಯು.ಕುರಿಯಾಕೋಸ್, ಎಸ್ಪಿ ಪಿ.ಎ.ಮಹಮ್ಮದ್ ಆರಿಫ್, ತರಬೇತಿ ಸಹಾಯಕ ನಿರ್ದೇಶಕ ಟಿ.ಕೆ.ಸುಬ್ರಮಣಿಯನ್, ಎಸ್ಪಿ ಪಿ.ಸಿ.ಸಜೀವ್, ಸಹಾಯಕ ಆಯುಕ್ತ ಕೆ.ಕೆ.ಸಜೀವ್, ಉಪ ಅಧೀಕ್ಷಕ ಅಜಯಕುಮಾರ್ ವೇಲಾಯುಧನ್ ನಾಯರ್, ಸಹಾಯಕ ಆಯುಕ್ತ ಟಿ.ಪಿ.ಪ್ರೇಮರಾಜನ್, ಉಪ ಅಧೀಕ್ಷಕ ಅಬ್ದುಲ್ ರಹೀಮ್ ಅಲಿ ಕುಂಞÂ್ಞ, ಸಹಾಯಕ ಆಯುಕ್ತ ರಾಜು ಕುಂಞನ್ ವೇಲಿಕ. ಪೋಲೀಸ್ ಇನ್ಸ್ ಪೆಕ್ಟರ್ ಎಂ.ಕೆ.ಹರಿಪ್ರಸಾದ್ ಪದಕ ಪಡೆದರು.
           ಈ ವರ್ಷ ಒಟ್ಟು 1,082 ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಅವರಲ್ಲಿ ಹೆಚ್ಚಿನವರು ಸಿಆರ್‍ಪಿಎಫ್‍ನಿಂದ ಬಂದವರು. ಸಿಆರ್‍ಪಿಎಫ್‍ನಿಂದ 171 ಮಂದಿ ಪದಕ ಪಡೆದಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries