HEALTH TIPS

ಹೊಸ ವರ್ಷಕ್ಕೆ ಕೆಲವು ಬದಲಾವಣೆಗಳು; ಬ್ಯಾಂಕ್ ಲಾಕರ್​ನಿಂದ ವಿಮೆ ಪಾಲಿಸಿ ಖರೀದಿವರೆಗೆ ಹೊಸ ರೂಲ್ಸ್

 

                ನವದೆಹಲಿ: ಜನವರಿಯಿಂದ ಹಲವು ಆರ್ಥಿಕ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಬ್ಯಾಂಕ್ ಲಾಕರ್ ಒಪ್ಪಂದ ನಿಯಮ ಬದಲಾವಣೆ, ಎನ್​ಪಿಎಸ್ ಚಂದಾದಾರರಿಗೆ ಕೋವಿಡ್ ಸಾಂಕ್ರಾಮಿಕದ ವೇಳೆ ನೀಡಲಾಗಿದ್ದ ಭಾಗಶಃ ಹಣ ಹಿಂಪಡೆಯುವ ನಿಯಮ ರದ್ದು ಸೇರಿ ಆರ್ಥಿಕತೆ ಸಂಬಂಧಿಸಿದ ಕೆಲವು ಬದಲಾವಣೆಗಳು ಆಗಲಿವೆ.

                     ಬ್ಯಾಂಕ್ ಲಾಕರ್ ನಿಯಮ ಪರಿಷ್ಕರಣೆ

              ಬ್ಯಾಂಕ್​ಗಳಲ್ಲಿ ಗ್ರಾಹಕರು ಪಡೆಯುವ ಸೇಫ್ ಲಾಕರ್ ಒಪ್ಪಂದದ ನಿಯವನ್ನು ಪರಿಷ್ಕರಿಸಲಾಗಿದ್ದು, ಹೊಸ ನಿಯಮವು ಜ.1ರಿಂದ ಜಾರಿಗೆ ಬರಲಿದೆ. ಹೀಗಾಗಿ ಬ್ಯಾಂಕ್​ಗಳು ನವೀಕೃತ ಒಪ್ಪಂದಕ್ಕೆ ಸಹಿ ಹಾಕುವಂತೆ ಎಸ್​ಎಂಎಸ್ ಅನ್ನು ಸೇಫ್ ಲಾಕರ್ ಹೊಂದಿರುವ ಗ್ರಾಹಕರಿಗೆ ಕಳುಹಿಸುತ್ತಿದೆ. 2021ರ ಆಗಸ್ಟ್​ನಲ್ಲಿ ಬ್ಯಾಂಕ್ ಸೇವ್ ಲಾಕರ್ ಕುರಿತ ನಿಯಮವನ್ನು ಬಿಗಿಗೊಳಿಸುವಂತೆ ಸುಪ್ರೀಂಕೋರ್ಟ್ ಆರ್​ಬಿಐಗೆ ಸೂಚಿಸಿತ್ತು.

                          ತೆರಿಗೆ ವಿನಾಯಿತಿಗೆ ಹೂಡಿಕೆ ಘೋಷಣೆ

                ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಬಯಸುವ ತೆರಿಗೆದಾರರು ಹೂಡಿಕೆ ಕುರಿತ ಘೋಷಣೆಯನ್ನು ಸಂಬಂಧಿಸಿದ ಹೂಡಿಕೆಗಳ ರಸೀದಿಯೊಂದಿಗೆ ಸಲ್ಲಿಸಬೇಕು. ಈ ಘೋಷಣೆಯನ್ನು ಮಾರ್ಚ್​ವರೆಗೂ ಸಲ್ಲಿಸಬಹುದಾಗಿದ್ದರೂ ಜನವರಿಯಲ್ಲೇ ಈ ಪ್ರಕ್ರಿಯೆ ಮುಗಿಸಿಕೊಂಡರೆ ಕ್ಷೇಮ.

                               ವಿಮೆಗೆ ಕೆವೈಸಿ ಕಡ್ಡಾಯ

                    ಹೊಸ ವರ್ಷದಲ್ಲಿ ಖರೀದಿಸುವ ಆರೋಗ್ಯ, ವಾಹನ, ಪ್ರವಾಸ, ಗೃಹ ವಿಮೆಗಳಿಗೆ ಕೆವೈಸಿ (ನೋ ಯುವರ್ ಕಸ್ಟಮರ್) ಕಡ್ಡಾಯ ಎಂದು ಭಾರತೀಯ ವಿಮಾ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಐಆರ್​ಡಿಎಐ) ತಿಳಿಸಿದೆ. ಹೊಸದಾಗಿ ಖರೀದಿಸುವ ಈ ವಿಮೆಗಳ ಕಂತಿನ ಮೊತ್ತವನ್ನು ಲೆಕ್ಕಿಸದೆ ಕೆವೈಸಿ ಅರ್ಜಿಯನ್ನು ಗ್ರಾಹಕರು ಭರ್ತಿ ಮಾಡಬೇಕು. ಪ್ರಸ್ತುತದ ನಿಯಮದ ಪ್ರಕಾರ, ಜೀವವಿಮೆ ಖರೀದಿಗೆ ಮಾತ್ರ ಕೆವೈಸಿ ನೀಡುವುದು ಕಡ್ಡಾಯವಾಗಿದೆ. ಈಗ ಅದನ್ನು ಇನ್ನಿತರ ವಿಷಯವಾರು ವಿಮೆಗೂ ವಿಸ್ತರಿಸಲಾಗಿದೆ.

                                ಪಾಸ್​ಬುಕ್ ಪ್ರತಿ ಪುರಾವೆ ಅಲ್ಲ

                ಮ್ಯೂಚುವಲ್ ಫಂಡ್​ನಲ್ಲಿನ ಹೂಡಿಕೆಗೆ ಬ್ಯಾಂಕ್ ಪಾಸ್​ಬುಕ್ ಗುರುತಿನ ಪುರಾವೆ ಎಂದು ಪರಿಗಣಿಸುವುದಿಲ್ಲ. ಆಧಾರ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ ಈ ರೀತಿಯ ಪುರಾವೆಗಳನ್ನು ಒದಗಿಸಬೇಕು.

                                    ಎನ್​ಪಿಎಸ್ ಭಾಗಶಃ ಹಿಂಪಡೆತ ಅಲಭ್ಯ

              ಕೋವಿಡ್ ಪರಿಸ್ಥಿತಿಯಲ್ಲಿ ಆರ್ಥಿಕ ಸಹಾಯಕ್ಕಾಗಿ ಬದಲು ಮಾಡಲಾಗಿದ್ದ ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್​ಪಿಎಸ್) ನಿಯಮವನ್ನು ಸರ್ಕಾರ ಕೈಬಿಟ್ಟಿದೆ. ಇದರಿಂದ ಚಂದಾದಾರರಿಗೆ ಭಾಗಶಃ ಹಣ ಹಿಂಪಡೆಯುವ ಅವಕಾಶ ತಪ್ಪಿದೆ. ಕೋವಿಡ್ ವೇಳೆಯಲ್ಲಿ ಹಣ ಹಂಪಡೆಯಲು ಇಚ್ಛಿಸುವವರು ಸ್ವಯಂ ದೃಢೀಕರಣದ ಮೂಲಕ ಅನ್​ಲೈನ್​ನಲ್ಲಿ ಅರ್ಜಿ ದಾಖಸಬಹುದಾಗಿತ್ತು. ಬದಲಾದ ಈ ನಿಯಮ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಸ್ವಾಯತ್ತ ಸಂಸ್ಥೆಗಳ ಎನ್​ಪಿಎಸ್ ಚಂದಾದಾರಾದ ನೌಕರರಿಗೆ ಅನ್ವಯ ಆಗಲಿದೆ. ತುರ್ತು ಸಂದರ್ಭದಲ್ಲಿ ಹಣ ಹಿಂಪಡೆಯಲು ಇರುವ ನಿಯಮ ಈ ಹಿಂದಿನಂತೆಯೇ ಇರಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries