HEALTH TIPS

ರಾಜ್ಯದ ಇನ್ನೂ ಮೂರು ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ದಾಳಿ; 1 ಸಾವು, 3 ಮಂದಿಗೆ ಗಾಯ

          ತಿರುವನಂತಪುರಂ: ಕೊಟ್ಟಾಯಂನ ಎರುಮೇಲಿಯಲ್ಲಿ ಕಾಡೆಮ್ಮೆ ದಾಳಿಯ ನಂತರ ರಾಜ್ಯದ ಇತರ ಮೂರು ಜಿಲ್ಲೆಗಳಲ್ಲಿ ಕಾಡು ಪ್ರಾಣಿಗಳ ದಾಳಿ ವರದಿಯಾಗಿದೆ.

            ಕೊಲ್ಲಂ, ತ್ರಿಶೂರ್ ಮತ್ತು ಮಲಪ್ಪುರಂನಲ್ಲಿ ಕಾಡು ಪ್ರಾಣಿಗಳ ದಾಳಿ ವರದಿಯಾಗಿದೆ.

        ಕೊಲ್ಲಂನ ಅಂಚಲ್‍ನಲ್ಲಿ ಕಾಡೆಮ್ಮೆಯ ದಾಳಿಯಿಂದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಎಡಮುಳ್ಳೈಕಲ್ ಮೂಲದ ಸಾಮ್ಯುವೆಲ್ ವರ್ಗೀಸ್ (65) ಮೃತರಾದವರು.  ಸ್ಯಾಮ್ಯುಯೆಲ್ ನಿನ್ನೆ ದುಬೈನಿಂದ ಮನೆಗೆ ಮರಳಿದ್ದರು.

        ತ್ರಿಶೂರ್‍ನ ಚೇಲಕ್ಕರ ಪೈಂಕುಳಂನಲ್ಲಿ ಕಾಡು ಹಂದಿಯೊಂದು ಸ್ಕೂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದ ಸಹೋದರರ ಬೈಕ್‍ಗೆ ಕಾಡು ಹಂದಿ ಡಿಕ್ಕಿ ಹೊಡೆದಿದೆ. ಅವರನ್ನು ತ್ರಿಶೂರ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ.

        ಮಲಪ್ಪುರಂನ ನಿಲಂಬೂರಿನಲ್ಲಿ ಜೇನು ಸಂಗ್ರಹಿಸುತ್ತಿದ್ದ ವೇಳೆ ಕರಡಿ ದಾಳಿಗೆ ಆದಿವಾಸಿ ಯುವಕ ಗಾಯಗೊಂಡಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಕಾಲಿಗೆ ಪೆಟ್ಟಾಗಿರುವ ಯುವಕನನ್ನು ಮಂಚೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries