ಕೊಚ್ಚಿ: ಬಿಜೆಪಿಯ ಹಿರಿಯ ನಾಯಕ ಪಿಪಿ ಮುಕುಂದನ್ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಕೊಚ್ಚಿ ಅಮೃತ ಆಸ್ಪತ್ರೆಯಲ್ಲಿ ಬೆಳಗ್ಗೆ 8.10ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅವರು ಮೃತಪಟ್ಟಿದ್ದಾರೆ. ಕಣ್ಣೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೊಚ್ಚಿಯಲ್ಲಿರುವ ಆರ್ಎಸ್ಎಸ್ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿತ್ತು.
ಪಿಪಿ ಮುಕಂದನ್ ಕೇರಳ ರಾಜಕೀಯದಲ್ಲಿ ದಿಗ್ಗಜರಾಗಿದ್ದರು. ಅವರು ಮಾಜಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ಹಿರಿಯ ಆರ್ಎಸ್ಎಸ್ ಪ್ರಚಾರಕರಾಗಿದ್ದರು. ಪಿ.ಪಿ.ಮುಕುಂದನ್ ಅವರು ಸುದೀರ್ಘ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಸುದೀರ್ಘ ಕಾಲ ಬಿಜೆಪಿಯನ್ನು ಸಂಘಟನಾ ಮಟ್ಟದಲ್ಲಿ ಬಲಪಡಿಸಿದ ನಾಯಕರಾಗಿದ್ದರು. ಅವರು 1988 ರಿಂದ 1995 ರವರೆಗೆ ಜನ್ಮಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
1946ರಲ್ಲಿ ಕಣ್ಣೂರು ಕೊಟ್ಟಿಯೂರು ಮಾನತಾರದಲ್ಲಿ ಜನಿಸಿದರು. ಪಿಪಿ ಮುಕುಂದನ್ ಅವರು 1988 ರಿಂದ 2004 ರವರೆಗೆ ಬಿಜೆಪಿ ಸಂಘಟನೆಯ ಉಸ್ತುವಾರಿ ವಹಿಸಿದ್ದರು. ನಂತರ ಅವರು ದಕ್ಷಿಣ ಭಾರತದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾದರು. ಕೇರಳದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಮುಕುಂದನ್ ಪ್ರಮುಖ ಪಾತ್ರ ವಹಿಸಿದ್ದರು. ಮುಕುಂದನ್ ಅಧ್ಯಕ್ಷರಾಗಿ ಕಾರ್ಯಕರ್ತರಲ್ಲಿ ಅತ್ಯುತ್ತಮ ಸಂಘಟಕರಾಗಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗೌಪ್ಯ ತಮಡದ ಪ್ರಚಾರಕರಾಗಿ ಕೆಲಸ ಮಾಡಿದರು. ಅವರು ಮೊದಲು ಕಣ್ಣೂರಿನಿಂದ ಕೊಚ್ಚಿಗೆ ಮತ್ತು ನಂತರ ತಿರುವನಂತಪುರಕ್ಕೆ ಪ್ರಚಾರಕರಾಗಿ ಕೆಲಸ ಮಾಡಿದರು. ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಮುಖಂಡರು, ಕಾರ್ಯಕರ್ತರು ಮುಕುಂದನ್ ಅವರ ಮಾರ್ಗದರ್ಶನ ಪಡೆಯುತ್ತಿದ್ದರು.