HEALTH TIPS

ಕಲಮಸ್ಸೆರಿ ಟಿಫಿನ್ ಬಾಂಬ್ ದಾಳಿ; ಹೈ ಅಲರ್ಟ್ ನಲ್ಲಿ ರಾಜ್ಯ; ರೈಲ್ವೆ ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳಲ್ಲಿ ಪೋಲೀಸರಿಂದ ಬಿಗು ತಪಾಸಣೆ

             ಕೊಚ್ಚಿ: ಕಲಮಸ್ಸೆರಿ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೋಲೀಸರು ಶೋಧ ಕಾರ್ಯವನ್ನು ವ್ಯಾಪಕಗೊಳಿಸಿದ್ದಾರೆ. ಪಾಲಕ್ಕಾಡ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಪೋಲೀಸರು ತಪಾಸಣೆ ಆರಂಭಿಸಿದರು.

             ರೈಲ್ವೆ ಪೋಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತಂಡವು ಕೊಚ್ಚಿ ಮತ್ತು ಪಾಲಕ್ಕಾಡ್‍ನಿಂದ ಶ್ವಾನದಳವನ್ನು ತರಿಸಿಕೊಂಡಿದೆ. ಸ್ಕ್ರೀನಿಂಗ್ ನಂತರ ಪ್ರಯಾಣಿಕರನ್ನು ತೆರವುಗೊಳಿಸಲಾಗಿದೆ. ರಾಜಧಾನಿಯಲ್ಲೂ ಪೋಲೀಸರು ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ. ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಪೋಲೀಸರನ್ನು ನಿಯೋಜಿಸಲಾಗಿದೆ. ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಟೆಕ್ನೋಪಾರ್ಕ್‍ಗಳು, ಆರಾಧನಾಲಯಗಳು ಮತ್ತು ಶಾಪಿಂಗ್ ಮಾಲ್‍ಗಳಲ್ಲಿ ತಪಾಸಣೆಯನ್ನು ಪ್ರಾರಂಭಿಸಲಾಗಿದೆ. ವಿವಿಧ ಪ್ರವಾಸಿ ಕೇಂದ್ರಗಳು ಮತ್ತು ಉದ್ಯಾನವನಗಳಲ್ಲಿ ಶ್ವಾನದಳವು ತಪಾಸಣೆ ನಡೆಸುತ್ತಿದೆ.

             ಕಲಮಸ್ಸೆರಿಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮಾವೇಶದ ವೇಳೆ ಬೆಳಗ್ಗೆ 9.35ರ ಸುಮಾರಿಗೆ ಬಾಂಬ್ ಸ್ಫೋಟ ಸಂಭವಿಸಿದೆ. ಡಿಜಿಪಿ ಎಸ್. ದರ್ವೇಶ್ ಸಾಹೇಬ್ ಮಾಹಿತಿ ನೀಡಿದರು. ಅದೊಂದು ಯೋಜಿತ ದಾಳಿ. ಸ್ಫೋಟದ ನಂತರ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಫೋಟ ಸಂಭವಿಸಿದ ಸಭಾಂಗಣದಲ್ಲಿ 2500 ಕ್ಕೂ ಹೆಚ್ಚು ಜನರು ಇದ್ದರು. ಗಾಯಗೊಂಡ 25 ಜನರನ್ನು ಕಲಮಶ್ಶೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಪೆÇಲೀಸರು ಸ್ಫೋಟ ಸಂಭವಿಸಿದ ಸಭಾಂಗಣವನ್ನು ಮುಚ್ಚಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries