HEALTH TIPS

ಬಾಗಿಲು ತೆರೆದ ಶಬರಿಮಲೆ: ಮಂಡಲ - ಮಕರವಿಳಕ್ ಯಾತ್ರೆ ಪ್ರಾರಂಭ

             ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನದ ಗಣರ್ಭಗುಡಿ ಮಕರವಿಳಕ್ ಉತ್ಸವಕ್ಕೆ ನಿನ್ನೆ ಸಂಜೆ ತೆರೆಯಲಾಗಿದೆ. ತಂತ್ರಿ ಕಂಠಾರರ್ ಮಹೇಶ್ ಮೋಹನ್ ನೇತೃತ್ವದಲ್ಲಿ ಬಾಗಿಲು ತೆರೆಯಲಾಯಿತು. 

             ಮೇಲ್ಶಾಂತಿ ಕೆ.ಜಯರಾಮನ್ ನಂಬೂದಿರಿ ಬಾಗಿಲು ತೆರೆದು ದೀಪ ಬೆಳಗಿಸಿದರು. ಇಂದಿನಿಂದ ಯಾತ್ರೆ ಆರಂಭವಾಗಲಿದೆ. ನಾಳೆ ನೂತನ ಅರ್ಚಕರು ಅಧಿಕಾರ ಸ್ವೀಕರಿಸಲಿದ್ದಾರೆ.

             ಇದೇ ವೇಳೆ ನೂತನವಾಗಿ ಆಯ್ಕೆಯಾಗಿರುವ ಶಬರಿಮಲೆ ಹಾಗೂ ಮಾಳಿಗಪ್ಪುರಂ ಹೊಸ ಅರ್ಚಕರ ಅಭಿಷೇಕ ಸಮಾರಂಭ ಇಂದು ನಡೆಯಲಿದೆ. ಡಿ.27ರಂದು ಮಂಡಲಮಾಸ ಪೂಜೆ ನಡೆಯಲಿದೆ. ಅಂದು ರಾತ್ರಿ 10 ಗಂಟೆಗೆ ಪೂಜೆ ನಡೆಯಲಿದೆ. ನಂತರ ಜನವರಿ 15 ರಂದು ಮಕರವಿಳಕ್ ಉತ್ಸವ, ನಡೆದು ಜನವರಿ 20ರವರೆಗೆ ದೇವಾಲಯ ತೆರೆದಿರಲಿದೆ. 

            ಅಯ್ಯಪ್ಪ ಭಕ್ತರು ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ. ವರ್ಚುವಲ್ ಬುಕ್ಕಿಂಗ್ ಮೂಲಕ ಯಾತ್ರಾರ್ಥಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries