ತಿರುವನಂತಪುರ: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಮೋಟಾರು ವಾಹನ ಇಲಾಖೆಯನ್ನು ಹಣಕಾಸು ಇಲಾಖೆ ಕೈಬಿಟ್ಟಿದ್ದರಿಂದ ಆರ್ ಸಿ ಪುಸ್ತಕ ಹಾಗೂ ಚಾಲನಾ ಪರವಾನಗಿ ವಿತರಣೆ ಬಿಕ್ಕಟ್ಟಿನಲ್ಲಿದೆ. 2.84 ಕೋಟಿ ಹಣ ಪಾವತಿಯಾಗದ ಕಾರಣ ಅಂಚೆ ಇಲಾಖೆ ವಿತರಣೆ ಸ್ಥಗಿತಗೊಳಿಸಿದೆ.
ಬಾಕಿ ಪಾವತಿಸಿ ವಿತರಿಸಿದ ಬಳಿಕ ವಿಲೇವಾರಿಗೊಳಿಸಲು ಅಂಚೆ ಇಲಾಖೆ ನಿರ್ಧಾರ ಕೈಗೊಂಡಿದೆ. ಇದರಿಂದ ಸ್ವಂತ ವಿಳಾಸದಲ್ಲಿ ಆರ್ ಸಿ ಬುಕ್ ಹಾಗೂ ಲೈಸನ್ಸ್ ಪಡೆಯಲು ಮುಂಗಡವಾಗಿ ಹಣ ಕಳುಹಿಸಿದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋಟಾರು ವಾಹನ ಇಲಾಖೆ ಹಣಕಾಸು ಇಲಾಖೆಯಿಂದ ಹಣ ಕೇಳಿದಾಗ ಆರ್ಥಿಕ ಮುಗ್ಗಟ್ಟು ಎನ್ನುತ್ತಾರೆ.
ಬುಧವಾರದಿಂದ ಸ್ಪೀಡ್ ಪೋಸ್ಟ್ ಮೂಲಕ ಪರವಾನಗಿ ಹಾಗೂ ಆರ್ ಸಿ ಪುಸ್ತಕ ವಿತರಣೆಯನ್ನು ಅಂಚೆ ಇಲಾಖೆ ಸ್ಥಗಿತಗೊಳಿಸಿದೆ. ಬುಧವಾರವμÉ್ಟೀ 15 ಸಾವಿರ ವಿತರಿಸಲಾಗಿದೆ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈನಿಂದ ಸೆಪ್ಟೆಂಬರ್ವರೆಗೆ ಪಾವತಿಗೆ ಬಾಕಿ ಇದೆ.
ಪರವಾನಗಿ ಮುದ್ರಣವನ್ನು ಏಪ್ರಿಲ್ನಲ್ಲಿ ಕೊಚ್ಚಿಗೆ ಸ್ಥಳಾಂತರಿಸಲಾಯಿತು. ಕಳೆದ ತಿಂಗಳು 1.38 ಲಕ್ಷ ಆರ್ಸಿಗಳು ಮತ್ತು 2.27 ಲಕ್ಷ ಪರವಾನಗಿಗಳನ್ನು ಮುದ್ರಿಸಲಾಗಿದೆ. ಇದಕ್ಕೆ ತಾಂತ್ರಿಕ ಬೆಂಬಲ ನೀಡುವ ಪಾಲಕ್ಕಾಡ್ ಐಟಿಐ ಲಕ್ಷಗಟ್ಟಲೆ ತೆರಬೇಕಿದೆ.


