HEALTH TIPS

ಮಣಿಪುರ | ಪೂಜಾ ಸ್ಥಳಗಳ ಸುರಕ್ಷತೆಗೆ ಕ್ರಮ: ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

               ವದೆಹಲಿ: ರಾಜ್ಯದಾದ್ಯಂತ ಸಾರ್ವಜನಿಕ ಪೂಜಾ ಸ್ಥಳಗಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಾನು ನೇಮಿಸಿರುವ ಸಮಿತಿಗೆ ಮಾಹಿತಿ ನೀಡುವಂತೆ ಸುಪ್ರಿಂ ಕೋರ್ಟ್‌, ಮಣಿಪುರ ಸರ್ಕಾರಕ್ಕೆ ಶುಕ್ರವಾರ ನಿರ್ದೇಶಿಸಿದೆ.

                ಜನಾಂಗೀಯ ಘರ್ಷಣೆಯ ವೇಳೆ ಹಾನಿಗೊಂಡಿರುವ ಅಥವಾ ನಾಶವಾಗಿರುವ ಪೂಜಾ ಸ್ಥಳಗಳ ಪಟ್ಟಿಯನ್ನು ಎರಡು ವಾರಗಳ ಒಳಗಾಗಿ ಸಿದ್ಧಪಡಿಸಿ ನ್ಯಾಯಮೂರ್ತಿ ಗೀತಾ ಮಿತ್ತಲ್‌ ನೇತೃತ್ವದ ಸಮಿತಿಗೆ ಒಪ್ಪಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠ ಹೇಳಿತು.

ಪೂಜಾ ಸ್ಥಳಗಳ ಮರು ನಿರ್ಮಾಣದ ಕುರಿತು ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಸಮಿತಿಗೆ ಸೂಚಿಸಿತು. ಈ ಪ್ರಕ್ರಿಯೆಯು ಎಲ್ಲಾ ಧರ್ಮಗಳ ಪೂಜಾ ಸ್ಥಳಗಳನ್ನೂ ಒಳಗೊಂಡಿರಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

                    ಮಣಿಪುರದಲ್ಲಿ ನಡೆದ ಜನಾಂಗೀಯ ಘರ್ಷಣೆ ಮೇ ತಿಂಗಳಿನಿಂದೀಚೆಗೆ 170 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries