HEALTH TIPS

ಭಾರತೀಯ ರಾಜ್ಯ ಪಿಂಚಣಿದಾರ ಸಂಘದಿಂದ ಪೆನ್ಶನ್ ದಿನಾಚರಣೆ

 

                     ಕಾಸರಗೋಡು: ಭಾರತೀಯ ರಾಜ್ಯ ಪಿಂಚಣಿದಾರರ ಮಹಾ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಪೆನ್ಷನ್ ದಿನವನ್ನು ಆಚರಿಸಲಾಯಿತು. ಕಾಸರಗೋಡಿನ ಚಂದ್ರಗಿರಿ ದೇವಸ್ಥಾನ ವಠಾರದಲ್ಲಿ ನಡೆದ ಸಭೆಯನ್ನು ಸಂಘದ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ಸಿ. ಕೆ. ಉಮಾದೇವಿ ಉದ್ಘಾಟಿಸಿದರು.

             ಸಂಘದ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಿ. ಎಚ್. ಸುರೇಶ ಪೆನ್ಷನ್ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕತೆ ವಹಿಸಿದರು.

                 ಚಂದು, ಸದಾನಂದ ಮಾಸ್ಟರ್, ಗೋಪಾಲನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ  ಸಿ. ಎಚ್. ಜಯೇಂದ್ರ ಸ್ವಾಗತಿಸಿದರು.   ಎ. ಮುರಳೀಧರನ್  ವಂದಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries