HEALTH TIPS

ಪ್ರಾದೇಶಿಕ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಕೆಜೆಯು ಬದ್ಧ- ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಸ್ಮಿಜನ್

ಕುಂಬಳೆ: ರಾಜ್ಯಾದ್ಯಂತ ನೂರಾರು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾದೇಶಿಕ ಪತ್ರಕರ್ತರು ಮಾಧ್ಯಮ ಕ್ಷೇತ್ರದ ಪ್ರಧಾನ ಶಕ್ತಿ ಪ್ರವರ್ತಕರಾಗಿದ್ದಾರೆ. ವಿಶಾಲವಾಗಿ ಬೆಳೆದಿರುವ ಮಾಧ್ಯಮ ರಂಗ ಎಷ್ಟೇ ಸವಾಲುಗಳಿದ್ದರೂ ಒಗ್ಗಟ್ಟಿನಿಂದ ಮುಂದುವರಿಯುವಲ್ಲಿ ಕೆ.ಜೆ.ಯು.(ಕೇರಳ ಜರ್ನಲಿಸ್ಟ್ ಯೂನಿಯನ್) ಪ್ರಧಾನ ಭೂಮಿಕೆಯೊದಗಿಸಿ, ಸಾಮಾನ್ಯ ಪತ್ರಕರ್ತರ ಧ್ವನಿಯಾಗಿದೆ ಎಂದು ಕೆಜೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಸ್ಮಿಜನ್ ಅಭಿಪ್ರಾಯಪಟ್ಟರು.
ಕುಂಬಳೆ ಶಿರಿಯದ ಡಿಎಂ ಕಬಾನ ರೆಸಾರ್ಟ್ ನಲ್ಲ ಗುರುವಾರ ಆಯೋಜಿಸಲಾದ ಕೆಜೆಯು ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಪತ್ರಕರ್ತರ ಕ್ಷೇಮನಿಧಿ ಸಂಬಂಧ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿ ರಾಜ್ಯ ಸಮಿತಿ ಸಂಪರ್ಕದಲ್ಲಿದೆ. ಮೀಸಲಿಟ್ಟ ಎರಡು ಕೋಟಿ.ರೂ.ಗಳ ವಿನಿಯೋಗದಲ್ಲಿ ದಶಕದಿಂದಲೂ ಸರ್ಕಾರ ಯಾವುದೇ ಕ್ರಮ ಕ್ಯೆಗೊಂಡಿಲ್ಲ. ಆದರೂ ಪ್ರಯತ್ನ ಮುಂದುವರಿದಿದೆ ಎಂದರು.
ಗ್ರಾಮೀಣ ಪತ್ರಕರ್ತರ ಎಲ್ಲಾ ನೋವು-ನಲಿವುಗಳಿಗೆ ಆಶ್ರಯವಾಗಿ ಸಂಘಟನೆ ಇರುತ್ತದೆ. ಕ್ಷೇಮನಿಧಿಯಂತಹ ಸರ್ಕಾರ ಕೃಪಾಪೋಶಿತ ನೆರವುಗಳಿಗೆ ಇನ್ನಿಲ್ಲದೆ ಪ್ರಯತ್ನಿಸಲಾಗುತ್ತಿದೆ ಎಂದರು.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಮಾತ್ರವಿರುವ ಸಹಕಾರಿ ಸಂಘ ಈಗಾಗಲೇ ಇತರೆಡೆಗಳಿಗೆ ಮಾದರಿಯಾಗುವಂತೆ ಕಾರ್ಯವೆಸಗುತ್ತಿದೆ. ಇದು ಇತರ ಜಿಲ್ಲೆಗಳಿಗೂ ವಿಸ್ತರಿಸಲಿದೆ ಎಂದರು. 
ರವೀಂದ್ರನ್ ಕೊಟ್ಟೋಡಿ ಅಧ್ಯಕ್ಷತೆ ವಹಿಸಿದ್ದರು. ಇ.ವಿ.ರಾಜೀವನ್, ಪ್ರಕಾಶನ್ ಪಯ್ಯನ್ನೂರ್, ಪ್ರಮೋದ್ ಕುಮಾರ್, ಸುರೇಶ್ ಕೂಕ್ಕಳ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries