HEALTH TIPS

ಗುರುವಾಯೂರಪ್ಪನಿಗೆ ಹರಕೆಯಾಗಿ 36 ಪವನ್ ಚಿನ್ನದ ಕಿರೀಟ ಅರ್ಪಣೆ

ಗುರುವಾಯೂರು: ಗುರುವಾಯೂರಪ್ಪನಿಗೆ ಕಾಣಿಕೆಯಾಗಿ 36 ಪವನ್ ಮೌಲ್ಯದ ಚಿನ್ನದ ಕಿರೀಟ ಅರ್ಪಿಸಲಾಗಿದೆ. ತಮಿಳುನಾಡಿನ ಕಲ್ಲಕುರಿಚಿ ಮೂಲದ ಕುಲೋತ್ತುಂಗನ್ ಅವರು ಕಿರೀಟವನ್ನು ಅರ್ಪಿಸಿರುವರು. 

ಮೊನ್ನೆ ಅವರು  ಕಿರೀಟ ಸಮರ್ಪಣೆ ಮಾಡಿದರು. ದೇವಸ್ವಂ ಅಧ್ಯಕ್ಷ ಡಾ. ವಿ.ಕೆ. ವಿಜಯನ್ ಕಿರೀಟವನ್ನು ಪಡೆದರು.

ಆಡಳಿತಾಧಿಕಾರಿ ಕೆ.ಪಿ. ವಿನಯನ್, ದೇವಸ್ಥಾನದ ಉಪ ಆಡಳಿತಾಧಿಕಾರಿ ಪ್ರಮೋದ್ ಕಲರಿಕ್ಕಲ್, ಹಾಗೂ ದೇವಸ್ಥಾನದ ಸಹಾಯಕ ವ್ಯವಸ್ಥಾಪಕರಾದ ಕೆ.ರಾಮಕೃಷ್ಣನ್, ಕೆ.ಕೆ. ಸುಭಾಷ್ ಸಿ.ಆರ್. ಲೆಜುಮೋಲ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಕುಲೋತ್ತುಂಗನ್ ಪತ್ನಿ ರೇಣುಕಾದೇವಿ ಮತ್ತು ಹರಕೆ ಅರ್ಪಿಸಿದ ಅವರ ಮಕ್ಕಳು ಆಗಮಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries