HEALTH TIPS

ಕೆ.ಎಸ್.ಆರ್.ಟಿ.ಸಿ. ಚಾಲಕ ಯದು ದೂರಿನ ಮೇಲೆ ಕ್ರಮ: ಆರ್ಯ ರಾಜೇಂದ್ರನ್ ಮತ್ತು ಸಚಿನ್ ದೇವ್‍ಗೆ ನ್ಯಾಯಾಲಯ ನೋಟಿಸ್

ತಿರುವನಂತಪುರಂ: ತಿರುವನಂತಪುರಂ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾಜಿ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಶಾಸಕ ಸಚಿನ್ ದೇವ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಕೆಎಸ್‍ಆರ್‍ಟಿಸಿ ಚಾಲಕ ಯದು ಸಲ್ಲಿಸಿದ ದೂರಿನ ಮೇರೆಗೆ ನೋಟಿಸ್ ಜಾರಿ ಮಾಡಲಾಗಿದೆ. ರಸ್ತೆ ಮಧ್ಯದಲ್ಲಿ ಕೆಎಸ್ ಆರ್‍ಟಿಸಿ ಬಸ್ ನಿಲ್ಲಿಸಿದ ಘಟನೆಯಲ್ಲಿ ಇಬ್ಬರಿಗೂ ವಿನಾಯಿತಿ ನೀಡಿದ ಚಾರ್ಜ್‍ಶೀಟ್ ವಿರುದ್ಧದ ಅರ್ಜಿಯ ಮೇರೆಗೆ ನ್ಯಾಯಾಲಯದ ಕ್ರಮ ಕೈಗೊಳ್ಳಲಾಗಿದೆ. 


ರಾಜಧಾನಿಯಲ್ಲಿ ರಸ್ತೆ ಮಧ್ಯದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸಿದ ಪ್ರಕರಣದಲ್ಲಿ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಅವರ ಪತಿ ಮತ್ತು ಶಾಸಕ ಸಚಿನ್ ದೇವ್ ಅವರಿಗೆ ವಿನಾಯಿತಿ ನೀಡಿ ಪೆÇಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ವಾಹನ ನಿಲ್ಲಿಸಿದ್ದಕ್ಕಾಗಿ ಮೇಯರ್ ಸಹೋದರನ ವಿರುದ್ಧ ಕೇವಲ ಸಣ್ಣ ಪ್ರಕರಣ ಮಾತ್ರ ದಾಖಲಾಗಿತ್ತು. ಅದೇ ಸಮಯದಲ್ಲಿ, ಮೇಯರ್ ವಿರುದ್ಧ ಅಶ್ಲೀಲ ಸನ್ನೆ ಮಾಡಿದ್ದಕ್ಕಾಗಿ ಬಸ್ ಚಾಲಕ ಯದು ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗುವುದು ಎಂದು ಘೋಷಿಸಲಾಯಿತು.

ಈ ವಿವಾದಾತ್ಮಕ ಘಟನೆ ಏಪ್ರಿಲ್ 27, 2024 ರಂದು ಪಲಾಯಂ ಸಫಲ್ಯಂ ಸಂಕೀರ್ಣದಲ್ಲಿ ನಡೆಯಿತು. ಆರ್ಯ ಮತ್ತು ಸಚಿನ್ ಪ್ರಯಾಣಿಸುತ್ತಿದ್ದ ಖಾಸಗಿ ವಾಹನವು ಕೆಎಸ್‍ಆರ್‍ಟಿಸಿ ಬಸ್ ಅನ್ನು ನಿಲ್ಲಿಸಿತು.

ವಾಗ್ವಾದ ನಡೆಯಿತು. ಕೆಎಸ್‍ಆರ್‍ಟಿಸಿ ಚಾಲಕ ಯದು ಮೇಯರ್ ಮತ್ತು ಶಾಸಕರ ವಿರುದ್ಧ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ಅಶ್ಲೀಲ ಭಾಷೆ ಬಳಸಿದ ಆರೋಪದ ಮೇಲೆ ದೂರು ದಾಖಲಿಸಿದರೂ, ಪೆÇಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಲಿಲ್ಲ.

ನಂತರ, ನ್ಯಾಯಾಲಯದ ಆದೇಶದ ಮೇರೆಗೆ ಕೈಗೆತ್ತಿಕೊಂಡ ಪ್ರಕರಣದಲ್ಲಿ, ಮೇಯರ್ ಆರ್ಯ ರಾಜೇಂದ್ರನ್, ಸಚಿನ್ ದೇವ್ ಶಾಸಕ, ಆರ್ಯ ಅವರ ಸಹೋದರ ಅರವಿಂದ್ ಮತ್ತು ಅವರ ಸಹೋದರನ ಪತ್ನಿಯನ್ನು ಆರೋಪಿಗಳನ್ನಾಗಿ ಮಾಡಲಾಯಿತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries