HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಕುಂಟಾಲುಮೂಲೆಯಲ್ಲಿ 21ನೇ ವಾಷರ್ಿಕೋತ್ಸವ       
   ಬದಿಯಡ್ಕ : ಕುಂಟಾಲುಮೂಲೆ ಶ್ರೀ ಆದಿಶಕ್ತಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 21ನೇ ವಾಷರ್ಿಕೋತ್ಸವವು ಡಿ.25ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಬೆಳಗ್ಗೆ ವೇದಮೂತರ್ಿ ಶಿವರಾಮ ಭಟ್ ಪೆರಡಾಲ ಇವರ ನೇತೃತ್ವದಲ್ಲಿ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ, ಶಾಸ್ತಾರ ಕಲ್ಪೋಕ್ತ ಪೂಜೆ ಮತ್ತು ದೇವಿಗೆ ವಿಶೇಷ ಪೂಜೆ ನಡೆಯಲಿರುವುದು. 11 ಘಂಟೆಗೆ ನಡೆಯುವ ಧಾಮರ್ಿಕ ಸಭೆಯಲ್ಲಿ ದಿ| ನಾರಾಯಣ ನಾಯ್ಕ ಕುಂಟಾಲುಮೂಲೆ ಹಾಗೂ ದಿ| ಜನಾರ್ಧನ ನಾಯ್ಕ ಕುಂಟಾಲುಮೂಲೆ ಇವರ ಸ್ಮರಣಾರ್ಥ ಮನೆಯವರಿಂದ `ಕುಂಟಾಲುಮೂಲೆ ಪ್ರಶಸ್ತಿ ಪ್ರಧಾನ' ಚಾಲಿತ್ತಡ್ಕ ಡಾ| ಮಹಾಬಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಕೊಡುಗೈ ದಾನಿ ಪೆರುಮುಂಡ ಶಂಕರನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಸೀತಾರಾಮ, ಸಿ.ಎಚ್.ಕೃಷ್ಣ ನಾಯ್ಕ ಚಾಲಿತ್ತಡ್ಕ, ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ಮನೋಹರ ಬಲ್ಲಾಳ್ ಅಡ್ವಳ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಧಾಮರ್ಿಕ ಭಾಷಣ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಉಪಸ್ಥಿತರಿರುವರು. ನಾರಾಯಣ ಮಣಿಯಾಣಿ, ಗೋವಿಂದ ನಾಯ್ಕ ಉಪಸ್ಥಿತರಿರುವರು. ರಾತ್ರಿ 7 ಘಂಟೆಗೆ ಪೂಂಗೋಡಿ ಮಾಡ ಶ್ರೀ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನ, ಶ್ರೀರಾಮ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮಾಡತ್ತಡ್ಕದಿಂದ ಶ್ರೀ ಮಂದಿರಕ್ಕೆ ಉಲ್ಪೆ ಮೆರವಣಿಗೆ, ಭಜನೆ, ರಾತ್ರಿ 10 ರಿಂದ ಮಲ್ಲ ಶ್ರೀ ದುಗರ್ಾಪರಮೇಶ್ವರೀ ಯಕ್ಷಗಾನ ಕಲಾಮಂಡಳಿ ಇವರಿಂದ ಮೋಕ್ಷ ಸಂಗ್ರಾಮ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries