HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             62 ನೇ ಕೇರಳ ರಾಜ್ಯ ಸೀನಿಯರ್ ಕಬಡ್ದಿ ಚಾಂಪ್ಯನ್ ಶಿಪ್  ಸಮಾಪ್ತಿ ಕಾಸರಗೋಡು ಜಿಲ್ಲೆ ಎರಡನೇ ಬಾರಿ ಪ್ರಥಮ

   ಮಂಜೇಶ್ವರ: 62 ನೇ ಕೇರಳ ರಾಜ್ಯ ಮಟ್ಟದ ಸೀನಿಯರ್ ಪುರುಷ ಮಹಿಳಾ ಕಬಡ್ಡಿ ಚಾಂಪ್ಯನ್ಶಿಪ್ ಭಾನುವಾರ ಮಂಜೇಶ್ವರದಲ್ಲಿ ಸಮಾಪ್ತಿಗೊಂಡಿತು. ಕೇರಳ ರಾಜ್ಯದ 14 ಜಿಲ್ಲೆಗಳ ಕಬಡ್ದಿ ಆಟಗಾರರ ಅಂತಿಮ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದು ಕೊಂಡರೆ ಕೊಲ್ಲಂ ಜಿಲ್ಲೆ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
    ಮಂಜೇಶ್ವರ ಗ್ರಾಮ ಪಂಚಾಯತು ಸ್ಟೇಡಿಯಂನಲ್ಲಿ ಆರಂಭಗೊಂಡ ಸೀನಿಯರ್ ಚಾಂಪ್ಯನ್ ಶಿಪ್ ಕಬಡ್ಡಿ ಪಂದ್ಯಾಟಕ್ಕೆ  ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ಶುಕ್ರವಾರ ಚಾಲನೆ ನೀಡಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಬಡ್ಡಿ ಅಸೋಸಿಯೇಶನ್ ಸೀನಿಯರ್ ಉಪಾಧ್ಯಕ್ಷ ಬಾಬು ಕುದ್ರಿಕ್ಕೋಡ್ ಧ್ವಜಾರೋಹಣಗೈಯುವುದರೊಂದಿಗೆ ಪಂದ್ಯಾಟಕ್ಕೆ ಚಾಲನೆ ದೊರಕಿತ್ತು.
  ಉದ್ಘಾಟನಾ ಸಮಾರಂಭ ಪ್ರಯುಕ್ತ 14 ಜಿಲ್ಲೆಗಳ ಪುರುಷ ಹಾಗೂ ಮಹಿಳಾ ತಂಡಗಳ ಪಥಸಂಚಲನ ಬೃಹತ್ ಮೆರವಣಿಗೆ ನಡೆದಿತ್ತು. ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಅಝೀಝ್ ಹಾಜಿ , ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್?ದ್ ವಕರ್?ಡಿ , ಗ್ರಾಮ ಪಂಚಾಯತು ಸದಸ್ಯೆ ಸುಪ್ರಿಯಾ ಶೆಣೈ , ಎಂ.ಹರಿಶ್ಚಂದ್ರ , ಕಬಡ್ಡಿ ಅಸೋಸಿಯೇಶನ್ ರಾಜ್ಯ ಕಾರ್ಯದಶರ್? ವಿಜಯ ಕುಮಾರ್ , ಪ್ರೊ' ಕಬಡ್ಡಿ ಕೋಚ್ ಜಗದೀಶ್ ಕುಂಬಳೆ , ಭಾಸ್ಕರ ರೈ , ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries