HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಮೇಲ್ವರ್ಗದ ಬಡವರಿಗೂ ಮೀಸಲಾತಿ ಘೋಷಿಸಿ
    ಚೆನ್ನೈ: ಮೀಸಲಾತಿಗೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋಟರ್್, ಮೇಲ್ವರ್ಗದ ಬಡವರಿಗೂ ಸಕರ್ಾರಿ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಸಿಗುವಂತಾಗಬೇಕು ಎಂದಿದೆ. ಸಾಮಾಜಿಕ ನ್ಯಾಯ ಎನ್ನುವುದು ಎಲ್ಲ ವರ್ಗಕ್ಕೂ ಸಿಗಬೇಕು. ಮುಂದುವರಿದ ಜಾತಿಗಳ ಬಡ ವಿದ್ಯಾಥರ್ಿಗಳಿಗೂ ಶಿಕ್ಷಣ, ಉದ್ಯೋಗ ಮೀಸಲಾತಿ ನೀಡುವ ಕುರಿತು ಪರಿಶೀಲನೆ ನಡೆಸಿ ಎಂದು ತಮಿಳುನಾಡು ಸಕರ್ಾರಕ್ಕೆ ನ್ಯಾ. ಎನ್. ಕಿರುಬಾಕರನ್ ಅವರಿದ್ದ ಪೀಠ ನಿದರ್ೇಶಿಸಿದೆ.
   `ಸಾಮಾಜಿಕ ನ್ಯಾಯ ಹಾಗೂ ವಿರೋಧಕ್ಕೆ ಹೆದರಿ ಮೇಲ್ವರ್ಗದ ಬಡ ವಿದ್ಯಾಥರ್ಿಗಳ ಪರವಾಗಿ ಇತರ ಸಮುದಾಯ, ಜಾತಿಯ ಜನರು ಧ್ವನಿ ಎತ್ತುತ್ತಿಲ್ಲ. ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡಿದರೆ, ಈಗ ಮೀಸಲಾತಿ ಲಾಭ ಪಡೆಯುತ್ತಿರುವವರು ತಮ್ಮ ಹಕ್ಕು ಕಿತ್ತುಕೊಳ್ಳಲಾಗುತ್ತಿದೆ ಎಂದು ಭಾವಿಸಬಾರದು. ಬಡವ ಯಾವ ಸಮುದಾಯದಕ್ಕೆ ಸೇರಿದವನಾದರೂ ಆತ ಬಡವನೆ. ಆಥರ್ಿಕ ಪರಿಸ್ಥಿತಿಗೆ ಅನುಗುಣವಾಗಿ ಮೀಸಲಾತಿ ವಿಸ್ತರಣೆಯಾಗಬೇಕು. ಎಲ್ಲ ಸಮುದಾಯಗಳು ಹಿಂದುಳಿದ ಸ್ಥಾನಮಾನಕ್ಕೆ ಬೇಡಿಕೆಯಿಡುತ್ತಿವೆ. ಪರಿಣಾಮವಾಗಿ ಮುಂದುವರಿದ ಜಾತಿಗಳ ಜನಸಂಖ್ಯೆ ಪ್ರಮಾಣ ಕ್ಷೀಣಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮೀಸಲಾತಿ ಅರ್ಥ ಕಳೆದುಕೊಳ್ಳಲಿದೆ ಎಂದಿದ್ದಾರೆ. ಸಕರ್ಾರಿ ಕಾಲೇಜುಗಳಲ್ಲಿನ ಸಾಮಾನ್ಯ ವರ್ಗಕ್ಕೆ ಮೀಸಲಾದ ವೈದ್ಯಕೀಯ ಸೀಟುಗಳನ್ನು ಹಿಂದುಗಳಿದ ವರ್ಗಕ್ಕೆ ವಗರ್ಾಯಿಸುವುದು ಕಾನೂನುವಾಹಿರ ಎಂದು ಘೋಷಿಸುವಂತೆ ವಿದ್ಯಾಥರ್ಿಗಳು ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ಕೋಟರ್್ ನಡೆಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries