HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಬಸ್ಸುಗಳಿಗೆ ಕಲ್ಲೆಸೆತ : ಸಮಾಜದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
    ಕಾಸರಗೋಡು: ಮುಳ್ಳೇರಿಯಾ, ಬದಿಯಡ್ಕ-ಕುಂಬಳೆ ರೂಟಿನಲ್ಲಿ ಮತ್ತು ಜಿಲ್ಲೆಯ ವಿವಿಧೆಡೆಗಳಲ್ಲಿ ಬಸ್ಸುಗಳ ಮೇಲೆ ಡಿ.6ರಂದು ಯಾವುದೇ ಪ್ರಚೋದನೆ ಇಲ್ಲದೆಯೇ ಮತಾಂಧರು ಕಲ್ಲೆಸೆತ ನಡೆಸಿದ್ದಾರೆ. ಶಾಂತವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಮತೀಯ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿರುವ ಇಂತಹ ಸಮಾಜದ್ರೋಹಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಸರಗೋಡು ಜಿಲ್ಲಾ ಮತ್ತು ಹೆವಿ ವೆಹಿಕಲ್ ಮಜ್ದೂರು ಸಂಘ(ಬಿಎಂಎಸ್) ಒತ್ತಾಯಿಸಿದೆ.
    ಬಸ್ಸು ಕಾಮರ್ಿಕರಿಗೆ ನಿರಾತಂಕವಾಗಿ ದುಡಿಯಲು ಮತ್ತು ಪ್ರಯಾಣಿಕರಿಗೆ ಬಸ್ಸಿನಲ್ಲಿ ನಿರಾತಂಕವಾಗಿ ಪ್ರಯಾಣಿಸುವಂತಹ ವಾತಾವರಣವನ್ನುಂಟು ಮಾಡಬೇಕು. ಇಲ್ಲದಿದ್ದರೆ ಬಸ್ಸುಗಳು, ಬಸ್ ಮಾಲಕರು ಮತ್ತು ನೌಕರರ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಖಂಡಿಸಿ ಅನರ್ಿಷ್ಟಾವಧಿ ಕಾಲಕ್ಕೆ ಬಸ್ ಕಾಮರ್ಿಕರ ಮುಷ್ಕರ ನಡೆಸಬೇಕಾಗಿ ಬರಲಿದೆ ಎಂದು ಸಂಘಟನೆಯ ಜಿಲ್ಲಾ ಘಟಕವು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ.
   ಕಾಸರಗೋಡಿನ ಬಿಎಂಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಸ್ ಆ್ಯಂಡ್ ಹೆವಿ ವೆಹಿಕಲ್ಸ್ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ವಿ.ಬಿ.ಸತ್ಯನಾಥ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕೆ.ಎ.ಶ್ರೀನಿವಾಸನ್, ಕೆ.ದಾಮೋದರನ್ ಎಣ್ಣಪಾರ, ಕೆ.ರಾಧಾಕೃಷ್ಣನ್, ಎಸ್.ಕೆ.ಉಮೇಶ್, ವಿಶ್ವನಾಥ ಶೆಟ್ಟಿ ಮೊದಲಾದವರು ಮಾತನಾಡಿದರು. ಕೆ.ಮೋಹನ್ ದಾಸ್ ಸ್ವಾಗತಿಸಿದರು. ಪ್ರಸಾದ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries