HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಸ್ನೇಹಾಲಯದಲ್ಲಿ ಕ್ರಿಸ್ಮಸ್ ಹಬ್ಬ, ವೃತ್ತಿ ಕೇಂದ್ರ ಉದ್ಘಾಟನೆ, ಸನ್ಮಾನ ಸಮಾರಂಭ
   ಮಂಜೇಶ್ವರ: ಪಾವೂರು ಬಾಚಳಿಕೆಯಲ್ಲಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದಲ್ಲಿ ಬುಧವಾರ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ವೈವಿಧ್ಯ ಹಾಗೂ ಔಚಿತ್ಯಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನೂತನವಾಗಿ ನಿಮರ್ಿಸಲಾದ ಸ್ನೇಹಾಲಯ ವೃತ್ತಿ ತರಬೇತಿ ಕೇಂದ್ರದ ಮಂದಿರವನ್ನು, ಸ್ನೇಹಾಲಯ ನಿವಾಸಿಗಳ ನೂತನವಾದ ವ್ಯವಸ್ಥಿತ ಧೋಬೀಖಾನೆಯನ್ನು ಉದ್ಘಾಟಿಸಲಾಯಿತು. ಲೂಯಿಸ್ ಡಿ"ಸೋಜಾ ಅವರು ವೃತ್ತಿ ತರಬೇತಿ ಕೇಂದ್ರ ಹಾಗೂ ಜೋನ್ ಮ್ಯಾಕ್ಸಿಂ ಡಿ" ಸೋಜಾ ಅವರು ಧೋಬೀಖಾನೆಯ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ನೇಹಾಲಯದ ನೂತನ ಉತ್ಪನ್ನಗಳಾದ ಸ್ನೇಹಾಲಯ ಫ್ಲೋರ್ ಕ್ಲೀನರ್, ಸ್ನೇಹಾಲಯ ಹಾಪರ್ಿಕ್, ಸ್ನೇಹಾಲಯ ಡಿಟಜರ್ೆಂಟ್ ಎಂಬಿವುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
   ಮಂಗಳೂರು ಪಕ್ಷಿಕೆರೆ ಇಗಜರ್ಿಯ ಧರ್ಮಗುರು ಆಂಡ್ರೂ ಡಿ" ಸೋಜಾ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮೂಡಬೆಳ್ಳೆ ಸಂತ ಲಾರೆನ್ಸ್ ಇಗಜರ್ಿಯ ಧರ್ಮಗುರು ಕ್ಲೆಮೆಂಟ್ ಮಸ್ಕರೇನಸ್, ಮಂಜೇಶ್ವರ ಪಾವೂರು ಇಗಜರ್ಿಯ ಧರ್ಮಗುರು ಜೋಸೆಫ್ ಕೆ.ಜೆ. ಮೊದಲಾದವರು ಪಾಲ್ಗೊಂಡು ಕ್ರಿಸ್ಮಸ್ ಸಂದೇಶ ನೀಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ರಾಜಕೀಯ, ಸಾಮಾಜಿಕ ಮುಂದಾಳು ಸುನಿಲ್ ಕುಮಾರ್ ಬಜಾಲ್, ಕೇರಳ ತುಳು ಅಕಾಡೆಮಿ ಸದಸ್ಯ ರಾಜು ಸ್ಟೀಫನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಫಾದರ್ ಕ್ಲೆಮೆಂಟ್ ಮಸ್ಕರೇನಸ್, ವೃತ್ತಿ ತರಬೇತಿ ಕೇಂದ್ರದ ಕಟ್ಟಡ ದಾನಿ ನೋರ್ಬಟರ್್ ಡಿ"ಸೋಜಾ ಹಾಗೂ ಅಬ್ದುಲ್ ರವೂಫ್ ಪುತ್ತಿಗೆ ಅವರನ್ನು ಸನ್ಮಾನಿಸಲಾಯಿತು.
  ಕ್ರಿಸ್ಮಸ್ ಕೇಕನ್ನು ಹಂಚಿ, ಕುಣಿದು ಕುಪ್ಪಳಿಸಿ ಹಬ್ಬವನ್ನಾಚರಿಸಲಾಯಿತು. ಕ್ರಿಸ್ಮಸ್ನ ಅಂಗವಾಗಿ ಸ್ನೇಹಾಲಯ ಸಿಬ್ಬಂದಿಗಳಿಗಾಗಿ ಏರ್ಪಡಿಸಲಾಗಿದ್ದ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ನೇಹಾಲಯದ ಆಡಳಿತ ನಿದರ್ೇಶಕ ಜೋಸೆಫ್ ಕ್ರಾಸ್ತಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಜೆಸಿಂತಾ ಪೆರೇರಾ ವಂದಿಸಿದರು. ರಫೀಖ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಪಾಲ್ಗೊಂಡಿದ್ದರು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries