HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕೊಂಡೆವೂರಿನಲ್ಲಿ ನಕ್ಷತ್ರೇಷ್ಟಿ ಆಮಂತ್ರಣ ಬಿಡುಗಡೆ
   ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ  ಫೆ. 1 ರಿಂದ 4 ರ ವರೆಗೆ ನಡೆಯಲಿರುವ 'ಪ್ರತಿಷ್ಠಾ ವರ್ಧಂತಿ' ಮತ್ತು ನಕ್ಷತ್ರೇಷ್ಟಿಯ ಹಾಗೂ ಫೆಬ್ರವರಿ 4 ರಿಂದ 11 ವರೆಗೆ ನಡೆಯುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಶ್ರೀಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಬುಧವಾರ ಬಿಡುಗಡೆಗೈದರು.
  ಈ ಸಂದರ್ಭದಲ್ಲಿ ಅವರು ಆಶೀರ್ವಚನಗೈದು ಒಳ್ಳೆಯ ಕೆಲಸ ಮಾಡಲು ದೇವರ ಅನುಗ್ರಹದೊಂದಿಗೆ ದೃಢ ಸಂಕಲ್ಪ ಮತ್ತು ಸಾಕಾರಗೊಳಿಸುವ ಪ್ರಯತ್ನ ಅಗತ್ಯ. ದೇವಸ್ಥಾನ, ಮಠಮಂದಿರಗಳಿರುವಲ್ಲಿ ಇಂತಹ ಧಾಮರ್ಿಕ ಕಾರ್ಯಗಳು ನಿರಂತರ ನಡೆದಾಗ ಲೋಕ ಸುಭಿಕ್ಷವಾಗುತ್ತದೆ ಎಂದರು.
  ವೇದಿಕೆಯಲ್ಲಿ ಉಪಸ್ಥಿತರಿದ್ದ ನಕ್ಷತ್ರೇಷ್ಟಿ ಸಮಿತಿಯ ಗೌರವಾಧ್ಯಕ್ಷ ಎಂ.ಜೆ.ಕಿಣಿ, ಅಧ್ಯಕ್ಷ ಡಾ.ಶ್ರೀಧರ ಭಟ್ ಉಪ್ಪಳ, ಗೌರವ ಕಾರ್ಯದಶರ್ಿ ನಾರಾಯಣ ಹೆಗ್ಡೆ ಕೋಡಿಬೈಲು,  ಶ್ರೀಧರ ಶೆಟ್ಟಿ ಮುಟ್ಟ, ಮಾತೃ ಸಮಿತಿಯ ಪ್ರಧಾನ ಕಾರ್ಯದಶರ್ಿ ಗೀತಾನಾರಾಯಣ್ ಮತ್ತು ಆಶ್ರಮದ ವಿಶ್ವಸ್ಥ ಗೋಪಾಲ್ ಬಂದ್ಯೋಡ್ ಉಪಸ್ಥಿತರಿದ್ದರು.  ಸಮಿತಿಯ ಪ್ರಧಾನ ಕಾರ್ಯದಶರ್ಿ  ಪುಷ್ಪರಾಜ್ ಐಲ ಸ್ವಾಗತಿಸಿ, ನಿರೂಪಿಸಿದರು. ಕಾಯರ್ಾಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries